ಹೊನ್ನಾವರ : ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಮೇ 7 ರಂದು ಹೊನ್ನಾವರ ತಾಲೂಕಿನಲ್ಲಿ ಸಂಘಟಿಸಿದ ರ್ಯಾಲಿಯನ್ನು ಹಿರಿಯ ಸಮಾಜವಾದಿ ಚಿಂತಕ ಕಾಗೋಡ ತಿಮ್ಮಪ್ಪನವರು ಉದ್ಘಾಟಿಸಲಿದ್ದು, ದಿಕ್ಸೂಚಿ ಭಾಷಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟೀಸ್ ಹೆಚ್ ಎನ್ ನಾಗಮೋಹನದಾಸ ಮಾಡಲಿದ್ದಾರೆ. ಗೌರವಾನ್ವಿತ ಆಮಂತ್ರಿರಾಗಿ ಶ್ರೀಮತಿ ತುಳಸಿಗೌಡ ಅಂಕೋಲಾ, ಪದ್ಮಶ್ರೀ ಪ್ರಶಸ್ತಿ ವಿಜೇತೆ ಇವರು ಆಗಮಿಸಲಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಶ್ರೀ ಶ್ರೀ ನಿಶ್ಚಲನಂದನಾಥ ಸ್ವಾಮೀಜಿಗಳು ಆದಿಚುಂಚನಗಿರಿ ಸಂಸ್ಥಾನಮಠ ಶಾಖಾಮಠ ಮಿರ್ಜಾನ, ಮಾನ್ಯ ಶ್ರೀ ಫಾ. ಗೆಬ್ರಿಯಲ್ ಲೋಪೀಸ್ ಗುರುಗಳು ಇನ್ ಪ್ರೆಂಟ್ ಜಿಸಸ್ ಚರ್ಚ ಹೋನ್ನಾವರ, ಮಾನ್ಯ ಶ್ರೀ ಅಬ್ದುಲ್ ರಖೀಬ್ ಎಮ್.ಜೆ ಪ್ರಧಾನ ಕಾರ್ಯದರ್ಶಿ ತಂಜೀಮ್ ಸಂಸ್ಥೆ ಭಟ್ಕಳ, ಮಾನ್ಯ ಶ್ರೀ ಡಿ. ಆರ್ ಪಾಟೀಲ್ ಸಾಮಾಜಿಕ ಚಿಂತಕರು ಗದಗ ಇವರುಗಳು ಆಗಮಿಸಲಿದ್ದಾರೆ.
ರ್ಯಾಲಿ: ಅರಣ್ಯ ಅತಿಕ್ರಮಣದಾರರು ವಿವಿಧ ವಾದ್ಯ, ವೇಷಭೂಷಣದೊಂದಿಗೆ ಹೊನ್ನಾವರ ಪೋಲೀಸ್ ಕ್ರೀಡಾಂಗಣದಿಂದ ಮಧ್ಯಾಹ್ನ 3.30 ಕ್ಕೆ ರ್ಯಾಲಿ ಪ್ರಾರಂಭಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ 4 ಘಂಟೆಗೆ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಸಭೆ ಜರುಗಿಸಲಾಗುವುದು.
ಆಸಕ್ತ ಅರಣ್ಯ ಅತೀಕ್ರಮಣದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.