• Slide
    Slide
    Slide
    previous arrow
    next arrow
  • ಮನುವಿಕಾಸ ಸಂಸ್ಥೆಯ ಕೆರೆ ಹೂಳೆತ್ತುವ ಕಾರ್ಯಕ್ಕೆ ರೈತರ ಶ್ಲಾಘನೆ

    300x250 AD

    ಶಿರಸಿ: ತಾಲೂಕಿನ ಬನವಾಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಲಿಂಗನಕಟ್ಟಿ ಕೆರೆಯನ್ನು ಪಂಚಾಯ್ತಿ ಹಾಗೂ ಸ್ಥಳೀಯ ರೈತರ ಸಹಕಾರದಿಂದ ಮನುವಿಕಾಸ ಸಂಸ್ಥೆಯವರು ಅಚ್ಚುಕಟ್ಟಾಗಿ ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ವಿಶ್ವನಾಥ ಹಾದಿಮನಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಕೆರೆಯ ಹೂಳೆತ್ತುವ ಕೆಲಸವು ಕಳೆದ 70 ವರ್ಷಗಳಿಂದ ಆಗಿಲ್ಲ. ಈ ಕೆರೆ ಹೂಳೆತ್ತುವುದರಿಂದ ರೈತರ ಬೆಳೆಗಳಿಗೆ ಹಾಗೂ ದನಕರುಗಳಿಗೆ ಕುಡಿಯುವುದಕ್ಕೆ ಬಹಳ ಅನುಕೂಲಕರವಾಗುತ್ತದೆ ಅಲ್ಲದೇ ಸುತ್ತಮುತ್ತಲಿನ ಭಾಗಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ ಎಂದು ರೈತರಾದ ಹನುಮಂತಪ್ಪ ನೆರೂರ, ದೇವೇಂದ್ರ ಹಾದಿಮನೆ, ಚಂದ್ರಪ್ಪ ಮರಾಠಿ ಮುಂತಾದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನುವಿಕಾಸ ಸಂಸ್ಥೆಯ ಈ ಕೆಲಸ ಶ್ಲಾಘನೀಯ. ಸುಮಾರು 80 ರಿಂದ 100 ಎಕರೆ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಲಿದೆ ಎಂದು ವಿಶ್ವನಾಥ ಹಾದಿಮನಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top