ಕಾರವಾರ: ತಾಲೂಕಿನ ಬಿಣಗಾದಲ್ಲಿಚಲಿಸುತ್ತಿದ್ದ ಬಸ್ನಿಂದವ್ಯಕ್ತಿ ಬಿದ್ದು ಗಂಭೀರ ಗಾಯಗಳಾಗಿವೆ. ಶಿರಸಿ ಹೊಸಬಸ್ ನಿಲ್ದಾಣದ ನಿವಾಸಿ ವಿನಯ ವಿಷ್ಣು ಬಾಡ (64) ಗಾಯಗೊಂಡ ವ್ಯಕ್ತಿಯಾಗಿದ್ದು, ಇವರು ತನ್ನ ಪತ್ನಿ ಸೋನಮ್ ವಿನಯ್ ಬಾಡ ಇವರೊಂದಿಗೆ ಕಾರವಾರದಿಂದ ಶಿರಸಿಗೆ ಪ್ರಯಾಣಿಸುತ್ತಿದ್ದರು.
ಬಸ್ನ ಮುಂದಿನ ಭಾಗದಲ್ಲಿ ಕುಳಿತಿದ್ದ ಈ ಇಬ್ಬರು ದಂಪತಿಗಳನ್ನು ನಿರ್ವಾಹಕ ಹಿಂಬದಿ ಸೀಟ್ನಲ್ಲಿ ಕುಳ್ಳುವಂತೆ ಸೂಚಿಸಿದ್ದಾನೆ. ಇಬ್ಬರು ಹಿಂದಿ ಸೀಟ್ನಲ್ಲಿ ಕುಳಿತುಕೊಳ್ಳಲು ಬಸ್ ಚಲಿಸುತ್ತಿದ್ದ ವೇಳೆಯೇ ಆಗಮಿಸುತ್ತಿದ್ದಂತೆ ಪತಿ ವಿನಯ ಬಾಡ ಬಸ್ನ ಹಿಂಬದಿ ಬಾಗಿಲಿನಿಂದ ಕೆಳಕ್ಕೆ ಉರುಳಿದ್ದು ಈ ವೇಳೆ ತಲೆ ಹಾಗೂ ಕೈ ಕಾಲಿಗೆ ಗಂಭೀರ ಗಾಯವಾಗಿದೆ.
ಈ ಕುರಿತು ಸಂಚಾರ ಠಾಣೆಯಲ್ಲಿ ಬಸ್ ಚಾಲಕ ಶಿರಸಿಯ ಪ್ರಭಾಕರ ಕೃಷ್ಣಾ ಶೆಟ್ಟಿ ಹಾಗೂ ನಿರ್ವಾಹಕ ಸುರೇಶ ನಾಗಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ.