ಯಲ್ಲಾಪುರ; ಕಳೆದ ಕೆಲವು ತಿಂಗಳ ಹಿಂದೆ ರಸ್ತೆ ಅಫಘಾತದಲ್ಲಿ ಮೃತ ಪಟ್ಟ ಸುರೇಂದ್ರ ರಾಮಯ್ಯ ಶೇರುಗಾರ ಅವರ ಕುಟುಂಬಕ್ಕೆ 15ಲಕ್ಷ ರೂ. ಪರಿಹಾರ ಚೆಕ್ ನ್ನು ದಿ ನ್ಯೂ ಇಂಡಿಯಾ ಅಶೂರೆನ್ಸ್ ಸಿನಿಯರ ಡಿವಿಜನಲ್ ಮ್ಯಾನೇಜರ್ ಶಶಿಕಾಂತ ಹಲಗೇಕರ ಅವರು ನರೇಶ ಶೇರುಗಾರ ಅವರಿಗೆ ನೀಡಿದರು.
ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಲಿ. ಧಾರವಾಡ ವಿಭಾಗ ಶಿರಸಿ ಹಾಗೂ ಶ್ರೀಮಹತಿ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಯಲ್ಲಾಪುರ ಇವರ ಆಶ್ರಯದಲ್ಲಿ ಪಟ್ಟಣದ ನಾಯಕನಕೆರೆ ಕೃಷ್ಣ ರೆಸೋಯಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಕ್ ನ್ನು ನೀಡಲಾಯಿತು.
ಡಿವಿಜನಲ್ ಮ್ಯಾನೇಜರ್ ಪ್ರಮೋದ ನಾಯಕ,ಶಿರಸಿ ಶಾಖೆಯ ವಿನಾಯಕ ಆವಾರಿ,ಲಾರಿ ಮಾಲಕರ ಸಂಘದ ಅಧ್ಯಕ್ಷ ನಾಗೇಂದ್ರ ಕವಾಳೆ,ಮಹತಿ ವಾಯುಮಾಲಿನ್ಯ ಕೇಂದ್ರದ ಮಂಜುನಾಥ ಕೋಮಾರ,ಶ್ರುತಿ ಕೋಮಾರ ಮುಂತಾದವರು ಇದ್ದರು.