• Slide
    Slide
    Slide
    previous arrow
    next arrow
  • ಲೋಕಕಲ್ಯಾಣಾರ್ಥವಾಗಿ ‘ಶತಚಂಡಿ ಮಹಾಯಾಗ’ ;ಸಚಿವ ಹೆಬ್ಬಾರ್ ಭಾಗಿ

    300x250 AD

    ಮುಂಡಗೋಡ: ಲೋಕಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಹಮ್ಮಿಕೊಂಡ ” ಶತಚಂಡಿ ಮಹಾಯಾಗ ” ಧಾರ್ಮಿಕ ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಪಾಲ್ಗೊಂಡರು.

    ಈ ವೇಳೆ ಮಾತನಾಡಿದ ಸಚಿವರು ಹೋಮ, ಹವನಗಳಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಭಕ್ತರಲ್ಲಿ ಕೆಟ್ಟ ಹವ್ಯಾಸಗಳು, ಋಣಾತ್ಮಕ ಚಿಂತನೆಗಳು ದೂರವಾಗಿ ಉತ್ತಮ ಸಂಸ್ಕಾರ, ಜ್ಞಾನ ಬೆಳೆಯುತ್ತದೆ.ಈ ಶತಚಂಡಿ ಮಹಾಯಾಗದಿಂದ ನಾಡಿನ ಸಂಕಷ್ಟಗಳು ದೂರವಾಗಿ ಸರ್ವರಿಗೂ ಒಳಿತಾಗಲಿ ಎಂದರು.

    300x250 AD

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ಎಲ್.ಟಿ.ಪಾಟೀಲ್,ಮಂಡಲಾಧ್ಯಕ್ಷರಾದ ಶ್ರೀ ನಾಗಭೂಷಣ ಹಾವಣಗಿ, ಪ.ಪಂ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹಾವೇರಿ, ಪ್ರಮುಖರಾದ ಶ್ರೀ ಉಮೇಶ್ ಬಿಜಾಪುರ, ಶ್ರೀ ಗುಡ್ಡಪ್ಪ ಕಾತೂರ, ಶ್ರೀ ರವಿ ಹಾವೇರಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top