ಭಟ್ಕಳ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಅನಿವಾರ್ಯ. ಭೂಮಿ ಹಕ್ಕಿಗೆ ಕಾನೂನಾತ್ಮಕ ಪರಿಹಾರ ನೀಡುವದು ಅವಶ್ಯ. ೩೦ ವರ್ಷ ಸಮಗ್ರ ಹೋರಾಟದ ತುಣುಕು ಮತ್ತು ಕಾನೂನಿನ ಅಂಶಗಳಿಂದ ಕೂಡಿದ ಸ್ಮರಣ ಸಂಚಿಕೆ ಹೋರಾಟಗಾರರ ವೇದಿಕೆ ಹೊರ ತಂದಿರುವುದು ದಾಖಲಾರ್ಹ ಎಂದು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಏ.17 ರಂದು ಭಟ್ಕಳದ ಶಿರಾಲಿಯ ಶಾರದಾಹೊಳೆ ಹಳೆಕೋಟೆ ಹನುಮಂತ ದೇವಾಲಯದ ಸಭಾಂಗಣದಲ್ಲಿ ಹೋರಾಟಗಾರರ ವೇದಿಕೆ ಹೊರತಂದಿರುವ ಸ್ಮರಣ ಸಂಚಿಕೆ ಅವಲೋಕಿಸುತ್ತ ಮಾತನಾಡಿದರು.
ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಉದಾಶೀಲತೆ ಬೇಡ. ಭೂಮಿ ಮಾನವ ಕುಲಕ್ಕೆ ಅನಿವಾರ್ಯ. ಅರಣ್ಯವಾಸಿಗಳು ಅರಣ್ಯದ ಅವಿಭಾಜ್ಯ ಅಂಗ ಎಂದು ಉಲ್ಲೇಖಿಸಿದರು.
ನಿಯೋಗದಲ್ಲಿ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರಂಗ ನಾಯ್ಕ ಬೆಳಕೆ, ವಾಮನ ನಾಯ್ಕ ಮಂಕಿ, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಉಪಸ್ಥಿತರಿದ್ದರು.