• Slide
    Slide
    Slide
    previous arrow
    next arrow
  • ಜಿಲ್ಲೆಯಲ್ಲಿ 3 ತಿಂಗಳೊಳಗೆ 6,500 ಮನೆಗೆ ವಿದ್ಯುತ್ ಸಂಪರ್ಕ; ಸಚಿವ ಪೂಜಾರಿ

    300x250 AD

    ಅಂಕೋಲಾ: ಜಿಲ್ಲೆಯಲ್ಲಿ 80,000 ಕ್ಕೂ ಅಧಿಕ ಜನರು ಅರಣ್ಯ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಇ-ಸ್ವತ್ತು ಸಮಸ್ಯೆಯನ್ನು ಕೂಡಲೇ ಕಂದಾಯ ಸಚಿವರು ಬಗೆಹರಿಸಿಕೊಡಬೇಕೆಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

    ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯತದ ಕುಂಟಗಣಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಹಾಗು ವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದ ಅವರು, ಬಡವರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ಅತ್ಯುತ್ತಮ ರೀತಿಯಲ್ಲಿ ಶೀಘ್ರವಾಗಿ ಪ್ರಯತ್ನ ಮಾಡುತ್ತಾರೆ ಎಂಬ ನಂಬಿಕೆ ನನ್ನದು ಎಂದರು.

    ಜಿಲ್ಲೆಯಲ್ಲಿ ಕೆಲವೆಡೆ ಈಗಲೂ ಸಹ ವಿದ್ಯುತ್ ಸಮಸ್ಯೆಯಿದ್ದು, ಇಂದು ಒಟ್ಟೂ 6,500 ಮನೆಗೆ ವಿದ್ಯುತ್ ಮಂಜೂರಾತಿ ಪತ್ರವನ್ನು ನೀಡುತ್ತಿದ್ದೇವೆ. ಇಂದನ ಸಚಿವ ಸುನೀಲ್ ಕುಮಾರ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, 12 ಕೋಟಿ ವೆಚ್ಚದಲ್ಲಿ ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲ ಮನೆಗೆಳಿಗೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.

    300x250 AD

    ಕಾರ್ಯಕ್ರಮವನ್ನು ಸಚಿವ ಆರ್. ಅಶೋಕ್ ಉದ್ಘಾಟಿಸಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಶಾಂತಾರಾಮ ಸಿದ್ದಿ ಇದ್ದರು. ಇದೇ ವೇಳೆ ಕಂದಾಯ ಇಲಾಖೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಧಿಸಿರುವ ಸಾಧನೆಗಳ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top