• Slide
    Slide
    Slide
    previous arrow
    next arrow
  • ಏ. 5 ಕ್ಕೆ ಯಲ್ಲಾಪುರದಲ್ಲಿ ಅರಣ್ಯವಾಸಿಗಳನ್ನು ಉಳಿಸಿ ಜಾಗೃತಿ ಜಾಥಾ

    300x250 AD

    ಯಲ್ಲಾಪುರ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ  ವ್ಯಾಪಕವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ  ರಾಜ್ಯಾದ್ಯಂತ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನು ಉಳಿಸಿ ಜಾಗೃತಿ ಜಾಥಾ ಕಾರ್ಯಕ್ರಮವು ಏಪ್ರಿಲ್‌ 5 ರಂದು ಯಲ್ಲಾಪುರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಏಪ್ರಿಲ್ 5 ಮಂಗಳವಾರದಂದು ಬೆಳಿಗ್ಗೆ  10:00 ಗಂಟೆಗೆ ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ಹಾಗೂ ಸಾಯಂಕಾಲ 3:00 ಘಂಟೆಗೆ ವಜ್ರಳ್ಳಿಯಲ್ಲಿ ಕಾರ್ಯಕ್ರಮ  ಪ್ರಾರಂಭವಾಗಲಿದೆ. ಜಾಥಾದ ಭಾಗವಾಗಿ ʼಹೋರಾಟದ ವಾಹನʼವು ಮುಂದಿನ 30 ದಿನಗಳ ಕಾಲ 2,000 ಕೀ.ಮೀ. ಸಂಚರಿಸಿ ಜಿಲ್ಲೆಯ 500 ಹಳ್ಳಿಗಳಿಗೆ ಭೇಟಿ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.   

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top