• Slide
    Slide
    Slide
    previous arrow
    next arrow
  • ಅಕ್ರಮ ಸಾರಾಯಿ ದಾಸ್ತಾನು ಮಾಡಿಟ್ಟಿದ್ದ ಆರೋಪಿಯ ಬಂಧನ

    300x250 AD

    ಹೊನ್ನಾವರ: ಮುಂಬರುವ ಹೋಳಿ ಹಬ್ಬದ ಸಮಯದಲ್ಲಿ ಸಾರಾಯಿ ಮಾರಾಟ ನಿಷೇಧಿಸಲಾಗುವುದರಿಂದ ಹೋಳಿ ಹಬ್ಬದ ಸಮಯದಲ್ಲಿ ಸಾರಾಯಿ ಮಾರಾಟ ಮಾಡಿ ಅಕ್ರಮವಾಗಿ ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ಸಾರಾಯಿ ದಾಸ್ತಾನು ಮಾಡಿಟ್ಟಿದ್ದ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.

    ಹಳದಿಪುರ ಗ್ರಾಮ ವಿಜಯಕುಮಾರ ರಾಮಕೃಷ್ಣ ನಾಯ್ಕ (42) ಈತನು ಆರೋಪಿತ ವ್ಯಕ್ತಿಯಾಗಿದ್ದಾನೆ.

    ಲಾಭ ಗಳಿಸುವ ಉದ್ದೇಶದಿಂದ ಆರೋಪಿಯು ಯಾವುದೇ ಪರವಾನಿಗೆಯಿಲ್ಲದೇ ಅಕ್ರಮವಾಗಿ ತನ್ನ ಅಂಗಡಿಯಲ್ಲಿ ಅನಧಿಕೃತವಾಗಿ ಸಾರಾಯಿಯನ್ನು ದಾಸ್ತಾನು ಮಾಡಿಟ್ಟಿದ್ದರ ಬಗ್ಗೆ ಮಾಹಿತಿ ತಿಳಿದು ಶ್ರೀಧರ್ ಎಸ್ ಆರ್ ಪಿ. ಐ ಹಾಗೂ ಮಹಾಂತೇಶ್ ನಾಯಕ್ ಪಿಎಸ್ಐ ರವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿತ ಬಂಧನದ ಜೊತೆಗೆ 53,144 ರೂ. ಮೌಲ್ಯದ 194.5 ಲೀಟರ್ ಸಾರಾಯಿಯನ್ನು ವಶಪಡಿಸಿಕೊಂಡಿದ್ದಾರೆ.

    300x250 AD

    ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


    Share This
    300x250 AD
    300x250 AD
    300x250 AD
    Leaderboard Ad
    Back to top