• Slide
    Slide
    Slide
    previous arrow
    next arrow
  • ಸೈಕಲ್ ನಲ್ಲಿಅಂಗಡಿಗೆ ತೆರಳಿದ್ದ ಬಾಲಕ ಸಾವು

    300x250 AD

    ಕಾರವಾರ: ಪರೀಕ್ಷೆ ಬರೆಯಲು ಪೇಪರ್ ತರಲು ಸೈಕಲ್ ನಲ್ಲಿಅಂಗಡಿಗೆ ತೆರಳಿದ್ದ ವೇಳೆ ಬಾಲಕನ ಸೈಕಲ್ ಸ್ಕಿಡ್ ಆಗಿ ಬಿದ್ದ ಪರಿಣಾಮ ತಲೆಯ ಹಿಂಬದಿಗೆ ಪೆಟ್ಟು ಬಿದ್ದಿದ್ದು, ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ತಾಲೂಕಿನ ಸುಂಕೇರಿಯ ಕಠಿಣಕೋಣದಲ್ಲಿ ನಡೆದಿದೆ.

    ಅನಿಕೇತದಾಸ್ (14) ಎಂಬಾತ ಮೃತಪಟ್ಟ ಬಾಲಕನಾಗಿದ್ದಾನೆ.

    ಅಂಗಡಿಗೆ ಸೈಕಲ್ ನಲ್ಲಿ ತೆರಳುತ್ತಿದ್ದ ವೇಳೆ ದೊಡ್ಡ ಮಸೀದಿ ಬಳಿ ಸೈಕಲ್ ಸ್ಕಿಡ್ ಆಗಿ ಬಿದ್ದಿದ್ದು, ತಲೆಯ ಹಿಂಬದಿಗೆ ಗಾಯವಾಗಿತ್ತು. ನಂತರ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಾಂಭೋಲಿಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಬಾಲಕನ ಕುಟುಂಬ ಮೂಲತಃ ಪಶ್ಚಿಮ ಬಂಗಾಲದವರಾಗಿದ್ದು ಹಾಲಿ ಸುಂಕೇರಿಯ ಕಠಿಣಕೋಣದಲ್ಲಿ ನೆಲೆಸಿದ್ದರು.

    300x250 AD

    ಈ ಕುರಿತು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top