ಶಿರಸಿ: ನಗರದ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಶ್ರೀ ಮಾರಿಕಾಂಬಾ ಜಾತ್ರೆಯ ಸಲುವಾಗಿ ವಿದ್ಯುತ್ ಮಾರ್ಗಗಳ ಪಾಲನ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.3 ರ ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ಚರ್ಚ ರಸ್ತೆ, ಐದು ರಸ್ತೆ, ಸಿ.ಪಿ ಬಜಾರ್, ಉಣ್ಣೇಮಠಗಲ್ಲಿ, ರಾಜೀವನಗರ, ವಿರಭದ್ರಗಲ್ಲಿ, ರಾಯರಪೇಟೆ, ಸಿಂಪೀಗಲ್ಲಿ, ಬಿಡ್ಕಿಬೈಲ್, ಮುಸ್ಲೀಂಗಲ್ಲಿ, ಕುಮಟ ರಸ್ತೆ, ಗಾಂಧಿನಗರ, ವಿಜಯನಗರ, ಅಂಬಾಗಿರಿ ಹಾಗೂ ರಾಜೀವನಗರ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.