• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್ ಗೊಬ್ಬರದ ಮೇಲಿನ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

    300x250 AD

    ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿಯ ಕೃಷಿ ಸುಪರ್ ಮಾರ್ಕೆಟ್ ವಿಭಾಗದಲ್ಲಿನ ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಕೃಷಿಮಿತ್ರ ಗೊಬ್ಬರ ಹಾಗೂ ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಖರೀದಿ ಮೇಲಿನ ಕೂಪನ್‍ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾದಲ್ಲಿ ವಿಜೇತರಾದ ಅದೃಷ್ಟಶಾಲಿಗಳಿಗೆ ಇಂದು ಆಡಳಿತ ಮಂಡಳಿ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು.

    ಲಕ್ಕಿ ಡ್ರಾದಲ್ಲಿನ ಮೊದಲನೇ ಬಹುಮಾನವಾದ ಇಲೆಕ್ಟ್ರಿಕ್ ಬೈಕ್ ವಿಜೇತರಾದ ವಿನಾಯಕ ಮಂಜುನಾಥ ಹೆಗಡೆ ಮೂರೂರು, ಎರಡನೇ ಬಹುಮಾನವಾದ 32’’ ಸ್ಮಾರ್ಟ ಎಲ್‍ಇಡಿ ಟಿ.ವಿ. ವಿಜೇತರಾದ ಸುಬ್ರಾಯ ರಾಮಚಂದ್ರ ಹೆಗಡೆ ಗುಂಡಿಗದ್ದೆ, ಮೂರನೇ ಬಹುಮಾನವಾದ ವೀಡ್ ಕಟರ್ ವಿಜೇತರಾದ ರಾಘವೇಂದ್ರ ಶ್ರೀನಿವಾಸ ಗಾಣಿಗ ಹೆಬ್ಬತ್ತಿ, ನಾಲ್ಕನೇ ಬಹುಮಾನವಾದ ಏರ್ ಗನ್ ವಿಎಕ್ಸ್100 ವಿಜೇತರಾದ ಮುಕುಂದ ತುಕಾರಾಮ ಗೊಂದಳಿ ಯಲ್ಲಾಪುರ, ಹಾಗೂ ಐದನೇ ಬಹುಮಾನವಾದ ಹೈ ಪ್ರೆಶರ್ ವಾಶರ್ ವಿಜೇತರಾದ ಅನಂತ ನಂಜುಂಡ ಸ್ವಾದಿ ಸೋಂದಾ ಇವರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

    300x250 AD

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳು, ಪ್ರಧಾನ ವ್ಯವಸ್ಥಾಪಕರಾದ ರವೀಶ ಹೆಗಡೆ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top