• Slide
    Slide
    Slide
    previous arrow
    next arrow
  • ಫೆ.28ಕ್ಕೆ ಕುಮಟಾದಲ್ಲಿ ಅರಣ್ಯವಾಸಿಗಳ ಉಳಿಸಿ- ಜಾಥ ಉದ್ಘಾಟನೆ

    300x250 AD

    ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಜಾಗೃತೆ ಮೂಡಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾದ್ಯಂತ ಸಾವಿರ ಕೀ.ಮೀ ಕ್ರಮಿಸಿ ಐದನೂರ ಹಳ್ಳಿಗಳಿಗೆ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳನ್ನು ಉಳಿಸಿ- ಜಾಥ ಕಾರ್ಯಕ್ರಮವನ್ನು ಕುಮಟ ತಾಲೂಕಿನಲ್ಲಿ ಫೆ.28 ರಂದು ಜಿಲ್ಲಾದ್ಯಂತ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಅವರು ಇಂದು ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡಿ ಮೇಲಿನಂತೆ ಹೇಳಿದರು.

     ಜಿಲ್ಲಾದ್ಯಂತ ಸಂಚರಿಸುವ ಜಾಥದಲ್ಲಿ ವಿಶೇಷ ರೀತಿಯಲ್ಲಿ ಅಲಂಕರಿಸಿದ ಜಾಥ ವಾಹನದ ಮೂಲಕ ಮೂವತ್ತು ದಿನಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸುತ್ತಾ ಅತೀ ಶೀಘ್ರದಲ್ಲಿ ಸುಫ್ರೀಂ ಕೋರ್ಟನಲ್ಲಿ ರಾಜ್ಯ ಸರಕಾರವು ಅಫೀಡಾವಿಟ್ ಸಲ್ಲಿಸುವಂತೆ ಈ ಸಂದರ್ಭದಲ್ಲಿ ಅಗ್ರಹಿಸಲಾಗುವುದು ಎಂದು ಹೇಳಿದರು.

    300x250 AD

    ಸಭೆಯಲ್ಲಿ  ತಾಲೂಕ ಅಧ್ಯಕ್ಷ ಲಕ್ಷ್ಮಣ , ರಾಜೇಶ್ ನೇತ್ರೇಕರ, ಎಮ್ ಆರ್ ನಾಯ್ಕ ಕಂಡ್ರಾಜಿ, ನೆಹರೂ ನಾಯ್ಕ, ಇಬ್ರಾಹಿಂ ಗೌಡಳ್ಳಿ, ಮಲ್ಲೇಶ ಸಂತೊಳ್ಳಿ, ಚಂದ್ರು ನಾಯ್ಕ, ಕಲ್ಲಪ್ಪ ಸಂತೊಳ್ಳಿ, ಎಮ್ ಕೆ ನಾಯ್ಕ, ಅರವಿಂದ ಗೌಡ, ದೇವರಾಯ ನಾಯಕ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top