• Slide
    Slide
    Slide
    previous arrow
    next arrow
  • ಫೆ.27ಕ್ಕೆ ಸೃಷ್ಟಿ ಕಲಾಪ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ; ಸನ್ಮಾನ, ಗುರುವಂದನೆ, ತಾಳಮದ್ದಳೆ ಕಾರ್ಯಕ್ರಮ

    300x250 AD

    ಶಿರಸಿ: ಸೃಷ್ಟಿ ಕಲಾಪ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸನ್ಮಾನ, ಗುರುವಂದನೆ ಹಾಗೂ ತಾಳಮದ್ದಳೆ ಕಾರ್ಯಕ್ರಮವನ್ನು ಫೆ.27 ರ ಮಧ್ಯಾಹ್ನ 3 ಘಂಟೆಗೆ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

    ಕಾರ್ಯಕ್ರಮವನ್ನುಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆ ಕುಮಟಾ ಉದ್ಘಾಟಿಸಲಿದ್ದು, ‘ಸೃಷ್ಟಿ ಕಲಾಪ’ ಸಂಸ್ಥೆಯ ಸಂಸ್ಥಾಪಕರಾದ ಡಾ. ವಿಜಯನಳಿನಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕರು ಹಾಗೂ ಅಂಕಣಕಾರರಾದ ಭುವನೇಶ್ವರಿ ಹೆಗಡೆ ಅತಿಥಿಯಾಗಿ ಆಗಮಿಸಲಿದ್ದಾರೆ. ಸೃಷ್ಟಿ ಕಲಾಪ’ದ ಮಾರ್ಗದರ್ಶಕರಾದ ಸುಬ್ರಾಯ ಹೆಗಡೆ ಕೆರೆಕೊಪ್ಪ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಕರ್ನಾಟಕ ಯಕ್ಷಗಾನ ಅಕೆಡೆಮಿ ಅಧ್ಯಕ್ಷರಾದ ಡಾ.ಜಿ ಎಲ್ ಹೆಗಡೆ ಕುಮಟಾ ಹಾಗೂ ಭುವನೇಶ್ವರಿ ಹೆಗಡೆಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

    ಸೃಷ್ಟಿ ಕಲಾಪದ ಮಾರ್ಗದರ್ಶಕರಾದ ಸುಬ್ರಾಯ ಹೆಗಡೆ ಕೆರೆಕೊಪ್ಪ ಇವರಿಗೆ ಗುರುವಂದನೆ ಅರ್ಪಿಸಲಾಗುತ್ತದೆ.

    300x250 AD

    ನಂತರ ‘ಜ್ವಾಲಾ’ಪ್ರಸಂಗದ ಪಾತ್ರಾಭಿನಯವನ್ನು ಡಾ.ಪ್ರಜ್ಞಾ ಮತ್ತಿಹಳ್ಳಿ ಮತ್ತು ಮಹಿಮಾ ಭಟ್ ಪ್ರಸ್ತುತ ಪಡಿಸಲಿದ್ದು, ಸೃಷ್ಟಿ ಕಲಾಪದ ಸದಸ್ಯೆಯರಿಂದ ” ಸುಧನ್ವಾರ್ಜುನ” ಮೊದಲ ಭಾಗದ ತಾಳಮದ್ದಳೆ ಪ್ರಸ್ತುತಿ ನಡೆಯಲಿದೆ.

    ಸಭಾಕಲಾಪದ ಆರಂಭದಲ್ಲಿ ಕುಮಾರಿ ತುಳಸಿ ಹೆಗಡೆ ಬೆಟ್ಟಕೊಪ್ಪ ಅವರಿಂದ ಯಕ್ಷ ನೃತ್ಯ ಕಾರ್ಯಕ್ರ ನಡೆಯಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top