ಕಾರವಾರ: ನಗರದ ಕನ್ನಡ ಭವನದಲ್ಲಿ ಫೆ. 26 ರಂದು ಮಧ್ಯಾಹ್ನ 4 ಗಂಟೆಗೆ ಮೀನುಗಾರರ ಸಮಾಲೋಚನಾ ಸಭೆ ನಡೆಯಲಿದೆ.
ಅಂದು ಕಾರವಾರ ಬಂದರು, ಕಡಲ ತೀರಗಳಲ್ಲಿನ ಯೋಜನೆಗಳ ಬಗ್ಗೆ ಮೀನುಗಾರರು ಇತರ ಸಂಘಟನೆಯವರು ಸಮಾಲೋಚನೆ ನಡೆಸಲಿದ್ದು, ಈ ಸಭೆಗೆ ನಗರದ ಹಲವು ಸಂಘಟನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಾರವಾರ ಕಡಲ ತೀರ ಉಳಿಸಿ ಹೋರಾಟ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.