• Slide
    Slide
    Slide
    previous arrow
    next arrow
  • ಮಾ.10 ರಿಂದ ಹೊಗೆವಡ್ಡಿ ವೀರಾಂಜನೇಯ ದೇವರ ಜಾತ್ರೆ

    300x250 AD

    ಭಟ್ಕಳ: ತಾಲೂಕಿನ ಗಡಿ ಭಾಗದಲ್ಲಿರುವ ಹೊಗೆವಡ್ಡಿಯ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಜಾತ್ರಾ ಮಹೋತ್ಸವ ಮಾ.10 ರಿಂದ 12 ರವರೆಗೆ ನಡೆಯಲಿದೆ.

    ಮಾ.10 ರ ಗುರುವಾರದಂದು ಬೆಳಿಗ್ಗೆ 8 ಗಂಟೆಯಿಂದ ದೇವಸ್ಥಾನದಲ್ಲಿ ವಿವಿಧ ಧಾಮಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ರಾತ್ರಿ 8-30ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮ ನೆರವೇರಲಿದೆ. ಮಾರ್ಚ 11 ಶುಕ್ರವಾರದಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ದೇವರಿಗೆ ಸಾರ್ವತ್ರಿಕ ಅಬಿಷೇಕ ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ , ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ 7 ಗಂಟೆಗೆ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಲಿದೆ.

    300x250 AD

    ರಾತ್ರಿ 9-30 ರಿಂದ ಸಂತೋಷ ಡಿ.ಜೆ. ಇವರ ಸಾರಥ್ಯದಲ್ಲಿ ರಾಷ್ಟ್ರಮಟ್ಟದ ಯೋಗ ಪಟುಗಳಿಂದ ಯೋಗ ಪ್ರದರ್ಶನ, ಗಾನ ಲಹರಿ ,ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಮಾರ್ಚ 12 ಶನಿವಾರದಂದು ಬೆಳಿಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ, ಮಹಾಪೂಜೆ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 4 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ದೀಪೋತ್ಸವ ರಾತ್ರಿ 7 ರಿಂದ ಗೋವರ್ಧನ ಭಟ್ಕಳ ಇವರ ಸಾರಥ್ಯದಲ್ಲಿ ಕರಾವಳಿಯ ನುರಿತ ಕಲಾವಿದರಿಂದ ಡಾನ್ಸ ಹಾಗೂ ರಸಮಂಜರಿ ಕಾರ್ಯಕ್ರಮ ರಾತ್ರಿ 10-30 ಕ್ಕೆ ಶ್ರೀ ಕೊಟೆ ವೀರಾಂಜನೇಯ ಯಕ್ಷ ಮಿತ್ರ ಬಳಗದವರಿಂದ ” ದೇವಿ ಮಹಾತ್ಮೆ ” ಎಂದು ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ ,ಉಗ್ರಾಣಿಮನೆ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top