• Slide
    Slide
    Slide
    previous arrow
    next arrow
  • ಅಪರಿಚಿತ ಶವದ ಅಂತ್ಯ ಸಂಸ್ಕಾರ; ತನಿಖೆ ಕೈಗೊಂಡ ಪೊಲೀಸರು

    300x250 AD

    ಭಟ್ಕಳ:ನೇತ್ರಾಣಿ ಸಮುದ್ರದ ಸಮೀಪ ಅಪರಿಚಿತ ವ್ಯಕ್ತಿಯ ಶವ ಕೊಳೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ 35-40 ವರ್ಷ ವಯಸ್ಸಿನ ಪ್ರಾಯದವನಾಗಿರಬಹುದು ಎಂದು ಅಂದಾಜಿಸಲಾಗಿದೆ.

    ಶವದ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ ಪೊಲೀಸರು ಸ್ಥಳಕ್ಕೆ ದಾವಿಸಿ ಶವವನ್ನು ಶಿರಾಲಿಯ ಅಳ್ವೆಕೋಡಿ ದಡಕ್ಕೆ ತಂದು ಮುರುಡೇಶ್ವರ ಪೊಲೀಸರಿಗೆ ಹಸ್ತಾಂತರಿದರು.

    ಶವದ ಮೇಲಿನ ಬಟ್ಟೆ ಹಾಗೂ ಸೊಂಟದ ಪಟ್ಟಿಗಳ ಆಧಾರದ ಮೇಲೆ ಈತನು ಮೀನುಗಾರನಿರಬಹುದು ಎಂದು ಶಂಕಿಸಲಾಗಿದೆ. ಮುರುಡೇಶ್ವರದ ನಿವಾಸಿ ಸುರೇಶ ಶೆಟ್ಟಿ ಅವರ ಸಹಾಯದೊಂದಿಗೆ ಕೊಳೆತ ಶವವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಮುರುಡೇಶ್ವರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯತು.

    300x250 AD

    ಮುರುಡೇಶ್ವರ ಪಿ.ಎಸ್.ಐ. ಪರಮಾನಂದ ಕೊನ್ನೂರು ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top