ಶಿರಸಿ: ನಗರದ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಾಗೂ ಮಾರಿಕಾಂಬ ದೇವಿ ಜಾತ್ರೆ ಸಲುವಾಗಿ ಮಾರ್ಗಗಳ ಪಾಲನ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.24 ರ ಗುರುವಾರ ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತುರಬಾನಗರ , ಮರಾಠಿಕೊಪ್ಪ, ಲಯನ್ಸ್ನಗರ, ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿ ನಗರ, ವಿದ್ಯಾನಗರ, ಡಿಪೊ, ಬಸಟ್ಟಿಕೆರೆ, ಕಾಲೇಜು ರಸ್ತೆ , ಕಸ್ತೂರಬಾ ನಗರ, ಕೆ.ಎಚ್.ಬಿ ಪ್ರದೇಶಗಳಲ್ಲಿ, ಶಿರಸಿ-1 ಹಾಗೂ ನೀಲೆಕಣಿ ಮಾರ್ಗದ ಝೂ ಸರ್ಕಲ್, ಪಡತಿಗಲ್ಲಿ, ರಾಘವೇಂದ್ರ ಸರ್ಕಲ್, ಐದು ರಸ್ತೆ, ಕುಮಟ ರಸ್ತೆ, ಮಾರ್ಕೆಟ್, ಹಳೆ ಬಸ್ ನಿಲ್ದಾಣ, ವೀರಭದ್ರಗಲ್ಲಿ, ರಾಯರಪೇಟೆ, ಗಾಂಧಿನಗರ, ಸಿ.ಪಿ ಬಝಾರ್, ನಟರಾಜ ರೋಡ್, ಮುಸ್ಲಿಂಗಲ್ಲಿ, ಶಿರಸಿ-2 ಹಾಗೂ ಮಾರಿಕಾಂಬ ಮಾರ್ಗದ ಅಶ್ವಿನಿ ವೃತ್ತ, ಯಲ್ಲಾಪುರ ರಸ್ತೆ, ಎ.ಪಿ.ಎಂ.ಸಿ, ಹೊಸಪೇಟೆ ರೋಡ್, ಟಿ.ಎಸ್.ಎಸ್ ರೋಡ್, ಬನವಾಸಿ ರಸ್ತೆ, ಮಾರಿಕಾಂಬ ನಗರ, ಇಂದಿರಾನಗರ, ಕರೆಗುಂಡಿ ರೋಡ್, ಹುಬ್ಬಳ್ಳಿ ರೋಡ್, ಅಯ್ಯಪ್ಪನಗರ ಹಾಗೂ ಗ್ರಾಮೀಣ ಶಾಖೆಯ ತಾರಗೋಡ , ಕೆಂಗ್ರೆ, ಮಾರಿಗದ್ದೆ, ದೇವನಳ್ಳಿ ,ಸಂಪಖಂಡ, ಹುಲೇಕಲ್, ಸಾಲ್ಕಣಿ, ವಾನಳ್ಳಿ,ಬನವಾಸಿ ಹಾಗೂ ಸುಗ್ಗಾವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.