• Slide
    Slide
    Slide
    previous arrow
    next arrow
  • ಮುರುಡೇಶ್ವರದ ಸಮೀಪ ಅಪರಿಚಿತ ಮೃತದೇಹ ಪತ್ತೆ; ದೇಹದ ಕೆಲ ಭಾಗವನ್ನು ತಿಂದ ಮೀನುಗಳು

    300x250 AD

    ಮುರುಡೇಶ್ವರ: ಅಪರಿಚಿಯ ಪುರುಷನ ಮೃತದೇಹವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿ ಯಾರೆಂಬ ಬಗ್ಗೆ ತನಿಖೆ ಪ್ರಾರಂಭಗೊಂಡಿರುವ ಘಟನೆ ತಾಲೂಕಿನ ಮುರುಡೇಶ್ವರದ ಸನಿಹ ನೇತ್ರಾಣಿ ದ್ವೀಪದ ಸಮೀಪದಲ್ಲಿ ನಡೆದಿದೆ.

    ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಯು ಕೆಲ ದಿನಗಳ ಹಿಂದೆ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದ್ದು, ಮೃತ ದೇಹದ ಕೈ ಕಾಲು ಹಾಗೂ ತಲೆ ಭಾಗ ಮೀನುಗಳು ಸಂಪೂರ್ಣವಾಗಿ ತಿಂದು ಹಾಕಿವೆ. ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವ್ಯಕ್ತಿಯ ಶವವನ್ನು ಕಂಡು ಜನರು ಕಂಗಾಲಾಗಿದ್ದರು ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top