ಧಾರವಾಡ: ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ, ಬೆಂಗಳೂರು ಇವರು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ, ಆರ್ಥಿಕ ವರ್ಷ-2023 ರ ವಿದ್ಯುತ್ ದರ ಪರಿಷ್ಕರಣಾ ಅರ್ಜಿಯ ಸಂಬಂಧ ಸಾರ್ವಜನಿಕ ವಿಚಾರಣೆ ಸಭೆಯನ್ನು ಫೆ.24 ರ ಗುರುವಾರ ಬೆಳಿಗ್ಗೆ 10.30 ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿಯ ನೂತನ ಸಭಾಂಗಣ ಕೊಠಡಿಯಲ್ಲಿ ಏರ್ಪಡಿಸಲಾಗಿದೆ.
ಸಾರ್ವಜನಿಕ ವಿಚಾರಣೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ನೊಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ನೋಂದಣಿಯಾದ ಸಾರ್ವಜನಿಕ/ಭಾಗೀದಾರರನ್ನು ಸಾರ್ವಜನಿಕ ವಿಚಾರಣೆ ಸಭೆಗೆ ಭಾಗವಹಿಸಲು ಅನುಮತಿ ನೀಡಲಾಗುವುದು. ಕೋವಿಡ್ -19 ಮಾರ್ಗಸೂಚಿ ಅನ್ವಯ ಸಭೆ ನಡೆಯಲಿದ್ದು, ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ, ತಮ್ಮ ಸಲಹೆಗಳನ್ನು ಮೌಖಿಕ/ಲಿಖಿತ ರೂಪದಲ್ಲಿ ಸಲ್ಲಿಸಬಹುದೆಂದು ಶಿರಸಿ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.