• Slide
    Slide
    Slide
    previous arrow
    next arrow
  • ವ್ಯಸನಮುಕ್ತ ಸಮಾಜದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ

    300x250 AD

    ಶಿರಸಿ: ಸ್ವರ್ಣವಲ್ಲೀ ಮಹಾಸಂಸ್ಥಾನ ಜಾಗೃತ ವೇದಿಕೆ ಸೋಂದಾ, ಐ.ಎಂ.ಎ. ಶಿರಸಿ ಹಾಗೂ ಆಯುಷ್ ಇಲಾಖೆಯ ವೈದ್ಯರುಗಳ ಸಹಯೋಗದೊಂದಿಗೆ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯಲ್ಲಿ “ವ್ಯಸನಮುಕ್ತ ಸಮಾಜ” ಕಾರ್ಯಕ್ರಮ ನಡೆಯಿತು.

    ಮುಖ್ಯ ಅಥಿತಿಗಳಾಗಿ ಡಾ.ಕೃಷ್ಣಮೂರ್ತಿ ರಾಯ್ಸದ್ ಅವರು ಮಾದಕ ದ್ರವ್ಯಗಳು ಮತ್ತು ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

    ಡಾ.ರವಿಕಿರಣ ಪಟವರ್ಧನ್ ಅವರು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

    300x250 AD

    ವಿದ್ಯಾರ್ಥಿ ಕುಮಾರ ಪ್ರಣವ್ ಟಿ. ಎಮ್. ಕಾರ್ಯಕ್ರಮವನ್ನು ನಿರ್ವಹಿಸಿದರೆ, ಕುಮಾರ ಸಮರ್ಥ ಹೆಗಡೆ ವಂದಿಸಿದನು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಸಂತ ಭಟ್ಟ , ಶಿಕ್ಷಕ -ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top