• Slide
    Slide
    Slide
    previous arrow
    next arrow
  • ಫೆ.22ಕ್ಕೆ ನಾಗಚೌಡೇಶ್ವರಿ ದೇವತೆಗಳ ವರ್ಧಂತ್ಯುತ್ಸವ;ಮಾರುತಿ ಪ್ರತಾಪ ಯಕ್ಷಗಾನ

    300x250 AD

    ಸಿದ್ದಾಪುರ:ತಾಲೂಕಿನ ಹಂಗಾರಖಂಡದ ದೇವಾಲಯದಲ್ಲಿ ಫೆ.22 ರ ಮಂಗಳವಾರದಂದು ಶ್ರೀ ಸಪರಿವಾರ ನಾಗಚೌಡೇಶ್ವರಿ ದೇವತೆಗಳ 5ನೇ ವರ್ಷದ ವರ್ಧಂತ್ಯುತ್ಸವದ ಅಂಗವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ವೇ.ಮೂ. ವಿನಯ ಭಟ್ ಕೊಳಗೀಬೀಸ್ ಇವರ ನೇತೃತ್ವದಲ್ಲಿ ನಡೆಯಲಿದೆ.

    ಅದೇ ದಿನ ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಆಗಮಿಸಲಿದ್ದಾರೆ.

    ಈ‌ ಸಂದರ್ಭದಲ್ಲಿ ಶಿರಸಿಯ ಎಂ.ಇ.ಎಸ್ ಕಾಲೇಜಿನ ಉಪನ್ಯಾಸಕರಾದ ಡಾ.ಗಣೇಶ ಶ್ರೀಧರ ಹೆಗಡೆ ಇವರಿಗೆ ಸನ್ಮಾನ ನಡೆಯಲಿದೆ.

    300x250 AD

    ರಾತ್ರಿ 10.30ರಿಂದ ಶ್ರೀ ವೀರಾಂಜನೇಯ ಯಕ್ಷ ಮಿತ್ರಮಂಡಳಿ ಬಂಗಾರಮಕ್ಕಿ ಹಾಗೂ ದಿಗ್ಗಜ ಅತಿಥಿ ಕಲಾವಿದರಿಂದ ಮಾರುತಿ ಪ್ರತಾಪ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top