• Slide
    Slide
    Slide
    previous arrow
    next arrow
  • ಅರಣ್ಯ ಭೂಮಿ ಹಕ್ಕಿಗಾಗಿ ಕಾನೂನಾತ್ಮಕ ಹೋರಾಟ ಮುಂದುವರೆಸಲು ನಿರ್ಧಾರ

    300x250 AD

    ಹೊನ್ನಾವರ: ಅರಣ್ಯ ಭೂಮಿ ಹಕ್ಕಿಗಾಗಿ ಸಾಂಘೀಕ ಮತ್ತು ಕಾನೂನಾತ್ಮಕವಾಗಿ ಹೋರಾಟದ ಮೂಲಕ ಭೂಮಿ ಹಕ್ಕಿಗಾಗಿ ಸಂಬಂಧಿಸಿ ವ್ಯಾಪಕವಾದ ಜನಜಾಗೃತಿ ಮಾಡಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಸಭೆಯಲ್ಲಿ ತಿರ್ಮಾನಿಸಲಾಯಿತು.

      ಇಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ, ಹೋನ್ನಾವರ ತಾಲೂಕಿನ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಜರುಗಿದ ಫೇ ೧೭ ಬೆಂಗಳೂರು ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.

      ವಾಸ್ತವ್ಯ ಹಾಗೂ ಸಾಗುವಳಿಗಾಗಿ ಜಿಲ್ಲೆಯ ಅರಣ್ಯವಾಸಿಗಳಿಗೆ  ಅರಣ್ಯ ಭೂಮಿ ಅನಿವಾರ್ಯ. ಭೂಮಿ ಮಂಜೂರಿಯಲ್ಲಿ ಸರಕಾರದ ವೈಫಲ್ಯದಲ್ಲಿಯೂ ಹೋರಾಟದ ಮೂಲಕ ಭೂಮಿ ಹಕ್ಕು ಪಡೆದುಕೊಳ್ಳಲು ಸನ್ನದ್ಧರಾಗಬೇಕೆಂದು ಹೋರಾಟಗಾರರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

      ಸಭೆಯ ಅಧ್ಯಕ್ಷತೆಯನ್ನು ತಾಲೂಕ ಭೂಮಿ ಅತೀಕ್ರಮಣ ಸಾಗುವಳಿದಾರರ ಅಧ್ಯಕ್ಷ ಚಂದ್ರಕಾAತ ಕೋಚರೆಕರ ವಹಿಸಿ ಕಾನೂನು ಅರಣ್ಯವಾಸಿ ಪರವಾಗಿದೆ ತಪ್ಪಾಗಿ ಅಥ್ಯೇðಯಿಸುವ ಮೂಲಕ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಅತಿಕ್ರಮಣದಾರರ ಹೋರಾಟವು ಡೆಲ್ಲಿಯಲ್ಲಿ ಜರುಗಿದ ರೈತ ಹೋರಾಟದ ಮಾದರಿಯಲ್ಲಿ ಜರುಗಿದರೇ ಮಾತ್ರ ಭೂಮಿ ಹಕ್ಕು ಸಿಗಲು ಸಾಧ್ಯ ಎಂದು ಅವರು ಹೇಳಿದರು.

      ದಿ. ೧೭ ರಂದು ಜರಗುವ ಬೆಂಗಳೂರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅತೀಕ್ರಮಣದಾರರು ಹೋಗಲು ತೀರ್ಮಾನಿಸಿದರು.

    300x250 AD

     ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ಸುರೇಶ ಮೇಸ್ತಾ ಸ್ವಾಗತ ಮಾಡಿ, ದೇವರಾಜ ಅರಸ್ ವಿಚಾರ ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗೇರಿ ಪ್ರಾಸ್ತವಿಕ ಭಾಷಣ ಮಾಡಿದರು. ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ ರಾಮ ಮರಾಠಿ, ಕೇಶವ ನಾಯ್ಕ, ಕೃಷ್ಣ ನಾಯ್ಕ, ಎಸ್ ಜಿ ಹೆಗಡೆ ಕೆರೆಕೊನ್ ಮುಂತಾದವರು ಮಾತನಾಡಿದರು.

    ಚರ್ಚೆಯಲ್ಲಿ ಲಾಯಿಡ್ ನರೋನಾ, ವಿನೋಧ ಯಲಕೊಟಗಿ, ಶೇಷಗಿರಿ ಯಲಕೊಟಗಿ, ದಾವುದ್ ಮುಂತಾದವರು ಉಪಸ್ಥಿತರಿದ್ದರು.

    ಅರಣ್ಯವಾಸಿಗಳ ನಿಲುವು ಪ್ರಕಟಣೆಗಾಗಿ ಒತ್ತಾಯ :
      ಕೇಂದ್ರ ಮತ್ತು ರಾಜ್ಯ ಸರಕಾರವು ಅರಣ್ಯವಾಸಿಗಳ ಪರವಾದ ನಿಲುವನ್ನು ಸುಫ್ರೀಂ ಕೋರ್ಟನಲ್ಲಿ ಪ್ರಕಟಿಸಬೇಕು, ಇಲ್ಲದಿದ್ದಲ್ಲಿ ಅರಣ್ಯ ಹಕ್ಕಿಗೆ ಸುಪ್ರೀಂ ಕೋರ್ಟನಲ್ಲಿ ವ್ಯತಿರಿಕ್ತವಾದ ಆದೇಶ ಬರುವುದರಲ್ಲಿ ಸಂಶಯವಿಲ್ಲ ಎಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top