ಹೊನ್ನಾವರ: ಅರಣ್ಯ ಭೂಮಿ ಹೋರಾಟದ ೩೦ ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆಗೆ ಫೇ.12 ರ ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಹೊನ್ನಾವರ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು, ಫೇ.13 ರಂದು ಮುಂಜಾನೆ 10 ಘಂಟೆಗೆ, ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣ, ಹೊನ್ನಾವರ ಸರ್ಕಲ್, ಹೊನ್ನಾವರದಲ್ಲಿ ಸಂಘಟಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅತೀಕ್ರಮಣದಾರರು ಸಭೆಗೆ ಆಗಮಿಸಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.