ಮುರ್ಡೇಶ್ವರ: ಕಾಯ್ಕಿಣಿ ಗ್ರಾಮದ ಬಸ್ತಿ ಬಜಾರ್ ರಸ್ತೆಯಲ್ಲಿ 4 ಜನರೊಂದಿಗೆ ಸೇರಿ ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಕುಡಿಯುತ್ತಾ ಕುಳಿತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಮಾದೇವ ಜಟ್ಟಾ ನಾಯ್ಕ (50)ನನ್ನು ಬಂಧಿಸಿದ್ದಾರೆ.
ಕಾಯ್ಕಿಣಿಯಲ್ಲಿ ಸ್ಟೇಷನರಿ ಅಂಗಡಿ ವ್ಯಾಪಾರಸ್ಥನಾಗಿದ್ದು, ಈತ ಬುಧವಾರದಂದು ಸಾಯಂಕಾಲ 7:15 ರ ಸುಮಾರಿಗೆ 4 ಜನರೊಂದಿಗೆ ಯಾವುದೇ ಪಾಸ್ ಯಾ ಪರ್ಮಿಟ್ ಇಲ್ಲದೇ ಸರಾಯಿ ಕುಡಿಯುತ್ತಿದ್ದ ವೇಳೆ ಪೊಲೀಸರ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ 4 ಜನರು ಓಡಿ ಹೋಗಿದ್ದು, ಒಬ್ಬ ಆರೋಪಿಯನ್ನು ಕಲಂ 15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ-1965 ರ ಅಡಿಯಲ್ಲಿ ಬಂಧಿಸಲಾಗಿದೆ. ಈ ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.