• Slide
    Slide
    Slide
    previous arrow
    next arrow
  • ಪಾಲಕಿ ಉತ್ಸವದ ಮೆರವಣಿಗೆಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಭಾಗಿ

    300x250 AD

    ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠದ ಪಾಲಕಿ ಉತ್ಸವದ ಮೆರವಣಿಗೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಪೂಜಾರಿ ಪಾಲ್ಗೊಂಡು ದೇವರ ದರ್ಶನ ಪಡೆದರು.

    ಕಾರವಾರದಿಂದ ಆಗಮಿಸಿದ ಸಚಿವರು ರಾತ್ರಿ 8 ಗಂಟೆಗೆ ನಗರದ ಚಿನ್ನಪಟ್ಟಣ ಹನುಮಂತ ದೇವಸ್ತಾನದ ಆವರಣದಲ್ಲಿದ್ದ ಗುರುಮಠದ ಪಾಲಕಿ ಉತ್ಸವದ ಮೆರವಣಗೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ಸಚಿವರ ಕರಿಕಲ್ ನಲ್ಲಿರುವ ದ್ಯಾನ ಮಂದಿರಕ್ಕೆ ಭೇಟಿ ನೀಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವರತಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

    300x250 AD

    ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ಬಿ.ಜೆ.ಪಿ. ಪಕ್ಷದ ಪ್ರಮುಖರಾದ ರವಿ ನಾಯ್ಕ ಜಾಲಿ, ತಾಲೂಕಾ ಬಿಜೆಪಿ.ಅದ್ಯಕ್ಷ ಸುಬ್ರಾಯ ದೇವಾಡಿಗ, ರಾಜೇಶ ನಾಯ್ಕ, ಗುರುಮಠ ದೇವಸ್ತಾನದ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣ ನಾಯ್ಕ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top