ಶಿರಸಿ: ಅರಣ್ಯ ಭೂಮಿ ಹೋರಾಟದ ೩೦ ವರ್ಷದ ಸ್ಮರಣ ಸಂಚಿಕೆ, ಸರಕಾರದ ಪ್ರತಿನಿಧಿಯೊಂದಿಗೆ ಚರ್ಚೆಗೆ ಫೇ. ೧೭, ಗುರುವಾರದಂದು ಬೆಂಗಳೂರಿನಲ್ಲಿ ಜರಗುವ ಕಾರ್ಯಕ್ರಮದ ಮಾಹಿತಿ ಹಾಗೂ ಪ್ರತೀ ಸೋಮವಾರ ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆಜರುಗಿಸಬೇಕೆಂಬ ಅರಣ್ಯ ಇಲಾಖೆಯ ಆದೇಶಗಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಶಿರಸಿ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು, ಫೇ. ೧೧ ರಂದು ಮುಂಜಾನೆ ೧೦:೦೦ ಘಂಟೆಗೆ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ, ಹಳೇ ಆರ್.ಟಿ.ಓ ಆಫೀಸ್, ಝೂ ಸರ್ಕಲ್ ಶಿರಸಿಯಲ್ಲಿ ಸಂಘಟಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ಅತಿಕ್ರಮಣದಾರರು ಸಭೆಗೆ ಆಗಮಿಸಲು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಕೋರಿದ್ದಾರೆ.