• Slide
    Slide
    Slide
    previous arrow
    next arrow
  • ಅಪರಿಚಿತ ವ್ಯಕ್ತಿ ಮಹಿಳೆಯೋರ್ವಳಿಗೆ 83 ಸಾವಿರ ರೂ.ವಂಚನೆ

    300x250 AD

    ಕಾರವಾರ: ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದ ಅಧಿಕಾರಿ ಎಂದು ನಂಬಿಸಿ, ಆರ್‌ಡಿ ಖಾತೆಯ ಕೆವೈಸಿ ಪಡೆದು ಶಿರಸಿಯ ಮಹಿಳೆಯೋರ್ವಳಿಂದ ಅಪರಿಚಿತ ವ್ಯಕ್ತಿಯು 83 ಸಾವಿರ ರೂ. ಲಪಟಾಯಿಸಿದ ಬಗ್ಗೆ ಮಂಗಳವಾರ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಶಿರಸಿಯ ಸಂಧ್ಯಾ ಕಿಣಿ ಎನ್ನುವವರು ವಂಚನೆಗೊಳಗಾದ ಮಹಿಳೆಯಾಗಿದ್ದು, ಜ.೨೫ ರಂದು 9433713245 ಈ ಸಂಖ್ಯೆಯ ನಂಬರ್‌ನಿಂದ ೨೪ ಗಂಟೆಯೊಳಗೆ ನಿಮ್ಮ ಕೆನರಾ ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಿ, ಇಲ್ಲವಾದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು. ಕೂಡಲೇ ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆ 9564807393 ಕ್ಕೆ ಸಂಪರ್ಕಿಸಿ ಎಂದು ಸಂಧ್ಯಾ ಅವರಿಗೆ ಮೆಸೇಜ್ ಬಂದಿರುತ್ತದೆ.

    300x250 AD

    ಇವರು ಗ್ರಾಹಕರ ಸೇವಾ ಕೇಂದ್ರದ ಸಂಖ್ಯೆಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಉತ್ತರಿಸಿ, ತಾನು ಗ್ರಾಹಕ ಅಷ್ಟ ಸೇವಾ ಕೇಂದ್ರದ ಅಧಿಕಾರಿ ಎಂದು ಪರಿಚಯಿಸಿಕೊಂಡು, ಕೆವೈಸಿ ಅಪ್ಡೇಟ್ ಮಾಡುವುದಾಗಿ ತಿಳಿಸಿ, ಎಟಿಎಂ ಕಾರ್ಡ್ ನಂಬರ್ ಹಾಗೂ ಓಟಿಪಿ ಪಡೆದುಕೊಳ್ಳುತ್ತಾನೆ. ತಕ್ಷಣವೇ, ನನ್ನ ಖಾತೆಯಿಂದ ೫೦ ಸಾವಿರ ಹಾಗೂ ೩೩ ಸಾವಿರದಂತೆ ಎರಡು ಬಾರಿ ಒಟ್ಟೂ 83 ಸಾವಿರ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡು ವಂಚನೆ ಮಾಡಿದ ಬಗ್ಗೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಂಧ್ಯಾ ಕಿಣಿ ದೂರು ದಾಖಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top