• Slide
    Slide
    Slide
    previous arrow
    next arrow
  • ಆಕಸ್ಮಿಕವಾಗಿ ಶೇಷಾದ್ರಿಪುರದ ಗುಡ್ಡಕ್ಕೆ ಬೆಂಕಿ

    300x250 AD

    ಕುಮಟಾ: ಪಟ್ಟಣದ ಚಿತ್ರಗಿಯ ಶೇಷಾದ್ರಿಪುರದ ಗುಡ್ಡದಲ್ಲಿ ಆಕಸ್ಮಿಕ ತಗಲಿದ ಬೆಂಕಿಯನ್ನು ಅಗ್ನಿ ಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಂದಿಸುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಿದ್ದಾರೆ.

    ಪಟ್ಟಣದ ಚಿತ್ರಗಿಯ ಶೇಷಾದ್ರಿಪುರದ ಗುಡ್ಡದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಕಿಮೀ ವರೆಗೆ ಬೆಂಕಿ ಆವರಿಸಿ, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಕುಮಟಾ ಪುರಸಭೆಯ ಉಪಾಧ್ಯಕ್ಷ ರಾಜೇಶ ಪೈ ತಕ್ಷಣ ಸ್ಥಳಕ್ಕೆ ಧಾವಿಸಿ, ಅಗ್ನಿಶಾಮಕ ದಳವನ್ನು ಕರೆಯಿಸಿದ್ದಾರೆ. ಅಲ್ಲದೇ, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಿದ್ದಾರೆ. ತಕ್ಷಣ ಬೆಂಕಿ ನಂದಿಸಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಯಾರೋ ಕಿಡಿಗೇಡಿಗಳ ಚೇಷ್ಠೆಯಿಂದ ಗುಡ್ಡಕ್ಕೆ ಬೆಂಕಿ ತಗಲಿದೆ ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top