ಶಿರಸಿ: 73 ನೇ ಗಣರಾಜ್ಯೋತ್ಸವವನ್ನು ಭಾರತೀಯ ವೈದ್ಯಕೀಯ ಸಂಘ ಶಿರಸಿ ಶಾಖೆಯಲ್ಲಿ ಪ್ರತಿವರ್ಷದಂತೆ ಆಚರಿಸಲಾಯಿತು.
ಶಾಖೆಯ ಅಧ್ಯಕ್ಷ ರಾದ ಡಾ||ರಾಮ ಹೆಗಡೆಯವರು ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಡಾ||ರವಿಕಿರಣ ಪಟವರ್ಧನ ಇವರನ್ನ ಭಾರತೀಯ ವೈದ್ಯಕೀಯ ಸಂಘ ಶಿರಸಿ ಹಾಗೂ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಸೈನಿಕರಾದ ಸುಬೇದಾರರು ಇ ರಾಮು ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘದ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.