• Slide
    Slide
    Slide
    previous arrow
    next arrow
  • ಮಾಲೀಕರು ರಸ್ತೆಯಲ್ಲಿ ದನ ಬಿಡದಂತೆ ನಗರಸಭೆಯಿಂದ ಸೂಚನೆ

    300x250 AD

    ಶಿರಸಿ: ನಗರಸಭೆ ವ್ಯಾಪ್ತಿಯ ರಸ್ತೆಯಲ್ಲಿ ಬಿಡಾಡಿ ದನಗಳ ಹಾವಳಿ ಜಾಸ್ತಿಯಾಗಿದ್ದು ಬೆಳಗ್ಗೆ ಮತ್ತು ರಾತ್ರಿ ಹೊತ್ತು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳಿವೆ. ಅಲ್ಲದೇ ದನಗಳ್ಳತನದ ಪ್ರಕರಣಗಳೂ ನಡೆಯುತ್ತಿರುವುದರಿಂದ ಪಶು ಮಾಲೀಕರು ತಮ್ಮ ಜಾನುವಾರುಗಳನ್ನು ಬೇಕಾಬಿಟ್ಟಿ ಬಿಡಬಾರದೆಂದು ನಗರಸಭೆ ವತಿಯಿಂದ ಸೂಚನೆ ನೀಡಲಾಗಿದೆ.
    ಇನ್ನು ಮೂರುದಿನಗಳ ಒಳಗಾಗಿ ದನಗಳ ಮಾಲೀಕರು ತಮಗೆ ಸಂಬಂಧಪಟ್ಟ ದನಕರುಗಳನ್ನು ತಮ್ಮ ಮನೆಯಲ್ಲಿ ಅಥವಾ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಬಿಡಾಡಿ ದನಗಳನ್ನು ಗೋಶಾಲೆಗೆ ರವಾನೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top