• Slide
    Slide
    Slide
    previous arrow
    next arrow
  • ಮಗನಿಗೆ ಹೆದರಿಸಿದರೆಂಬ ಕಾರಣಕ್ಕೆ ಮಗನ ಸ್ನೇಹಿತರನ್ನು ಮನೆಗೆ ಕರೆದು ಕುಟುಂಬಸ್ಥರಿoದ ಹಲ್ಲೆ

    300x250 AD

    ಹಳಿಯಾಳ: ತನ್ನ ಮಗನಿಗೆ ಹೆದರಿಸಿದರು ಎಂಬ ಕಾರಣಕ್ಕೆ ಮಗನ ಇಬ್ಬರು ಸ್ನೇಹಿತರನ್ನು ತಮ್ಮ ಮನೆಗೆ ಕರೆದು ಕುಟುಂಬದ 6 ಜನರು ಸೇರಿ ಥಳಿಸಿದ ಘಟನೆ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಪ್ರಕರಣಕ್ಕೆ ಸಂಬoಧಪಟ್ಟoತೆ ಗಾಂಧಿನಗರದ ಆಯಿಷಾ ದೂರು ದಾಖಲಿಸಿದ್ದು, ದೂರಿನಲ್ಲಿ ದಾವಲ್ ಸಾಬ್ ನೀರಲಗಿ ಇವರ ಮಗ ತನ್ನ ಮಕ್ಕಳಿಬ್ಬರನ್ನು ಅವರ ಮನೆಗೆ ಕರೆದಿದ್ದಾನೆ. ನಂತರ ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೈ, ಮುಖ, ಮರ್ಮಾಂಗಗಳ ಮೇಲೆ ಥಳಿಸಿ, ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    300x250 AD

    ಈ ಪ್ರಕರಣಕ್ಕೆ ಸಂಬoಧಿಸಿ ಸುಭಾಷನಗರದ ದಾವಲ್ ಸಾಬ್ ನೀರಲಗಿ, ಅಬ್ದುಲ್ ರಝಾಕ್ ನೀರಲಗಿ, ಅಸ್ಲಂ ನೀರಲಗಿ, ಫಾತಿಮಾ ನೀರಲಗಿ ಹಾಗೂ ಇನ್ನಿಬ್ಬರು ಮಹಿಳೆಯರ ಮೇಲೆ ದೂರು ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಕ್ಕಳೀರ್ವರನ್ನು ದಾಂಡೇಲಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಒಳಪಡಿಸಿ ಧಾರವಾಡ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರ ಪೊಲೀಸ್ ಠಾಣೆಯ ಪಿ. ಎಸ್. ಐ. ಕಿರಣ್ ಪಟೇಲ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top