ಶಿರಸಿ: ಇಲ್ಲಿನ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.13 ಗುರುವಾರ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ ಮಾರ್ಗಗಳ ಪ್ರದೇಶಗಳಾದ ಸಿ.ಪಿ. ಬಝಾರ, ರಾಜೀವನಗರ, ಐದು ರಸ್ತೆ, ನಟರಾಜ ರಸ್ತೆ, ಮುಸ್ಲೀಂಗಲ್ಲಿ, ಮಾರ್ಕೆಟ್ ಪ್ರದೇಶ, ವೀರಭದ್ರಗಲ್ಲಿ, ಕುಮಟಾ ರಸ್ತೆ, ನಿಲೇಕಣಿ , ವಿಜಯನಗರ ರಾಘವೇಂದ್ರ ಸರ್ಕಲ್ ಝೂ ಸರ್ಕಲ್, ಪಡ್ತಿಗಲ್ಲಿ ಹಾಗೂ ಗಾಂಧಿನಗರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.