• Slide
    Slide
    Slide
    previous arrow
    next arrow
  • ರೈಲ್ವೆ ಇಲಾಖೆ ಸಿಬ್ಬಂದಿ ಸಮಯ ಪ್ರಜ್ಞೆ; ಕಾರವಾರದಲ್ಲಿ ರೈಲಿನಡಿ ಸಿಲುಕಿದ ಪ್ರಯಾಣಿಕನ ರಕ್ಷಣೆ

    300x250 AD


    ಕಾರವಾರ: ರೈಲ್ವೆ ಬೋಗಿಯಿಂದ ರೈಲಿನ ಅಡಿಭಾಗಕ್ಕೆ ಆಯಾ ತಪ್ಪಿ ಬೀಳುತಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.


    ರೈಲ್ವೆ ಸಿಬ್ಬಂದಿ ನರೇಶ್ ರಕ್ಷಣೆ ಮಾಡಿದವರಾಗಿದ್ದು, ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ(59) ರಕ್ಷಣೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪ್ಲಾಟ್ ಪಾರಂ ಒಂದರಲ್ಲಿ ಲಗೇಜು ತೆಗೆದುಕೊಳ್ಳಲು ಟ್ರೈನ್ ನಿಂದ ದೇಸಾಯಿ ರವರು ಇಳಿಯುವಾಗ ಟ್ರೈನ್ ಹೊರಟಿದ್ದರಿಂದ ಆಯಾತಪ್ಪಿ ಬಿದ್ದಿದ್ದರು, ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಇವರನ್ನು ರಕ್ಷಣೆ ಮಾಡಿದ್ದಾರೆ. ಚಿಕ್ಕಪುಟ್ಟ ಗಾಯವಾಗಿದ್ದ ಅವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ರೈಲ್ವೆ ಇನ್ಸಪೆಕ್ಟರ್ ನೀಲೇಶ್ ದುಬೆ ಯವರ ಸಹಾಯದಿಂದ ಮತ್ತೊಂದು ಟ್ರೈನ್ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ರೈಲ್ವೆ ಇಲಾಖೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top