ಅಂಕೋಲಾ: ಸರಕಾರಿ ಅಧಿಕಾರಿಯೋರ್ವರು ವಿಐಪಿ ಟ್ರ್ಯಾಕಿನಲ್ಲೇ ತಮ್ಮ ವಾಹನವನ್ನು ಬಿಡಬೇಕೆಂದು ಪಟ್ಟು ಹಿಡಿದು ಮುಕ್ಕಾಲು ಗಂಟೆ ಸರಕಾರೀ ವಾಹನ ನಿಲ್ಲಿಸಿಟ್ಟು ದರ್ಪತೋರಿದ ಘಟನೆ ರಾಷ್ಟ್ರೀಯ ಹೆದ್ದಾರಿ ಬೆಲೇಕೇರಿ ಟೋಲಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಟೋಲಗೇಟನಲ್ಲಿ ಲಘು ವಾಹನ, ಭಾರೀ ವಾಹನ, ಸ್ಥಳೀಯ ವಾಹನ, ಅಂಬ್ಯುಲನ್ಸ ಹೀಗೆ ಬೇರೆ ಬೇರೆ ಟ್ರ್ಯಾಕಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಐಪಿಗಳ ವಾಹನಗಳು ಬಂದಾಗ ನಿರ್ದಿಷ್ಠ ಟ್ರ್ಯಾಕನಲ್ಲಿ ಸಾಗಬೇಕಾಗುತ್ತದೆ. ವಿಐಪಿ ಟ್ರ್ಯಾಕನಲ್ಲಿ ಓರ್ವ ಸೆಕ್ಯೂರಿಟಿ ಗಾರ್ಡಇದ್ದು ಸೈರನ್ಇರುವ ಎಸ್ಕಾರ್ಟ ವಾಹನದ ಜೊತೆ ವಿಐಪಿಗಳ ವಾಹನ ಬಂದಾಗ ಮಾತ್ರ ಈ ಗೇಟನ್ನುಓಪನ್ ಮಾಡಲಾಗುತ್ತದೆ.
ಆದರೆ ನೀರಾವರಿಗೆ ಸಂಬಂಧಪಟ್ಟಇಲಾಖೆಯಅಧಿಕಾರಿಯೋರ್ವರುತಮ್ಮ ಸರಕಾರೀಜೀಪನ್ನು ವಿಐಪಿ ಗೇಟ್ ಮೂಲಕವೇ ಬಿಡಬೇಕೆಂದು ಪಟ್ಟು ಹಿಡಿದಿದ್ದಾರೆ. ನಿಯಮದ ಪ್ರಕಾರ ಬಿಡುವಂತಿಲ್ಲ ಸ್ಥಳೀಯ ಮತ್ತು ಸರಕಾರೀ ವಾಹನಗಳನ್ನು ಬೇರೆಟ್ರ್ಯಾಕನಲ್ಲಿ ಉಚಿತವಾಗಿ ಬಿಡಲಾಗುತ್ತದೆ ಎಂದುಟೋಲ್ ಸಿಬ್ಬಂದಿಯವರು ತಿಳಿಹೇಳಿದರೂ ಪಟ್ಟು ಬಿಡದೆತಾನುಅಲ್ಲಿಂದಲೇ ಹೋಗುವದಾಗಿದರ್ಪತೋರಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಅಧಿಕಾರಿಇದೇರೀತಿ ವರ್ತಿಸುತ್ತಿದ್ದದ್ದುಅಲ್ಲಿನ ಸಿಸಿ ಕ್ಯಾಮರಾ ಹಾಗೂ ಪ್ರವಾಸಿಗರ ಮೊಬೈಲಗಳಲ್ಲೂ ಸೆರೆಯಾಗಿದೆ.
ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಅಧಿಕಾರಿಗಳೇ ಸಭ್ಯತೆ ಮೀರಿ ನಡೆದಾಗ ಅದಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.