• Slide
    Slide
    Slide
    previous arrow
    next arrow
  • ಹಳಿಯಾಳದಲ್ಲಿ ಜ.6ಕ್ಕೆ ಕಸಾಪ ಖಾಯಂ ಸದಸ್ಯರ ಸಭೆ

    300x250 AD

    ಹಳಿಯಾಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆಯನ್ನು ಜನವರಿ 6 ರಂದು ಸಂಜೆ 4.30 ಗಂಟೆಗೆ ಹಳಿಯಾಳದ ಜವಳಿಗಲ್ಲಿಯಲ್ಲಿರುವ ವಿರಕ್ತ ಮಠದಲ್ಲಿ ಕರೆಯಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್.ವಾಸರೆ ಇಂದು ತಿಳಿಸಿದ್ದಾರೆ.

    300x250 AD


    ಸಭೆಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಕಸಾಪ ಜೊಯಿಡಾ ತಾಲೂಕು ಘಟಕದ ಅಧ್ಯಕ್ಷರ ಆಯ್ಕೆಯ ಕುರಿತಂತೆ ಅಭಿಪ್ರಾಯ ಸಂಗ್ರಹಿಸುವ ಸಮಾಲೋಚನೆಯನ್ನು ನಡೆಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಯಂತೆ ಈ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಹಳಿಯಾಳ ತಾಲೂಕಿನ ಕಸಾಪ ಆಜೀವ ಸದಸ್ಯರು ಪಾಲ್ಗೊಂಡು ಅಗತ್ಯ ಸಲಹೆ ಸೂಚನೆ ನೀಡುವಂತೆ ಬಿ.ಎನ್.ವಾಸರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top