• Slide
    Slide
    Slide
    previous arrow
    next arrow
  • ಚಾಲಕನ ಅಚಾತುರ್ಯ; ಶಿರಸಿ ಪೆಟ್ರೋಲ್ ಬಂಕ್’ನಲ್ಲಿ ಎದುರಲ್ಲಿದ್ದ ವ್ಯಕ್ತಿ ಮೇಲೆ ಹತ್ತಿದ ಕಾರ್

    300x250 AD

    ಶಿರಸಿ: ಪಟ್ಟಣದ ನೀಲೇಕಣಿ ಬಳಿಯಿರುವ ಪೆಟ್ರೋಲ್ ಬಂಕ್ ಒಂದರಲ್ಲಿ ವಾಹನ ಚಾಲಕನ ಅಚಾತುರ್ಯದಿಂದ ಕಾರ್ ಪೆಟ್ರೊಲ್ ಹಾಕುವ ವ್ಯಕ್ತಿಗೆ ಬಡಿದು ತೀವ್ರ ಗಾಯಗಳಾಗಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ.

    ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ವ್ಯಾಗನಾರ್ ಕಾರ್ ಚಾಲಕ, ವಾಹನ ಚಾಲೂ ಮಾಡಿ, ಚಲಿಸುವಾಗ ಚಾಲಕ ಗೊಂದಲಕ್ಕೊಳಗಾಗಿ ಎದುರಿಗಿರುವ ವ್ಯಕ್ತಿಯನ್ನು ಬೈಕ್ ಸಮೇತ ದೂಡಿಕೊಂಡು ಹೋಗಿದ್ದಾನೆ. ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು, ಇನ್ನೋರ್ವನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ ಎನ್ನಲಾಗಿದೆ.

    300x250 AD

    ಈ ಮೊದಲು ಆಟೋ ಗೇರ್ ವಾಹನ ಚಲಾಯಿಸುತ್ತಿದ್ದ ಚಾಲಕ, ಪ್ರಸ್ತುತ ಗೇರ್ ಇರುವ ವಾಹನ ಚಲಾಯಿಸಿದ್ದು, ಗೊಂದಲಕ್ಕೆ ಕಾರಣವಾಗಿದೆ ಎಂಬ ಮಾಹಿತಿ ದೊರೆತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top