ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ಒಂಭತ್ತನೇ ವರ್ಗದ ವಿದ್ಯಾರ್ಥಿನಿ ಭೂಮಿಕಾ ಸತೀಶ ಭಟ್ಟ ಇವಳು ರಾಜ್ಯಮಟ್ಟದ ಅಂತರ್ಜಾಲ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಉತ್ತಮ ಭಾಷಣಕಾರಳು, ಸಂಗೀತ ಕಲಾವಿದಳು, ಚಿತ್ರ ಕಲಾವಿದಳೂ ಆದಈಕೆಯ ಈ ಅಪರೂಪದ ಪ್ರತಿಭೆಯನ್ನು ಶಾಲಾ ಆಡಳಿತ ಮಂಡಳಿ, ಮುಖ್ಯಾಧ್ಯಾಪಕಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
ಸಂಸ್ಕೃತ ಶಿಕ್ಷಕರಾದ ಗೀತಾ ಮೂಳೆ ಹಾಗೂ ಸುರೇಶ ಹೆಗಡೆ ಈಕೆಗೆ ಮಾರ್ಗದರ್ಶನ ಮಾಡಿದ್ದರು.