ಕುಮಟ: ತಾಲೂಕ ಅರಣ್ಯವಾಸಿಗಳ ಸಭೆಯನ್ನು ಸ್ಥಳೀಯ ಮಹಾಸತಿ ಸಭಾಭವನದಲ್ಲಿ ಡಿ. 18 ಶನಿವಾರದಂದು ಮುಂಜಾನೆ 10 ಗಂಟೆಗೆ ಕರೆಯಲಾಗಿದೆ ಎಂದು ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಮಂಜು ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ದಿಶೆಯಲ್ಲಿ ಬೆಳಗಾಂವ ಅಧಿವೇಶನದ ಡಿಸೆಂಬರ್ 22 ರಂದು ಅರಣ್ಯವಾಸಿಗಳ ‘ಬೆಳಗಾಂವ ಚಲೋ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಚರ್ಚಿಸುವ ಉದ್ದೇಶದಿಂದ ಕರೆಯಲಾಗಿದ್ದು, ಚರ್ಚೆಯಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ಜಿಲ್ಲಾ ಸಂಚಾಲಕ ಜಿ.ಎಮ್ ಶೆಟ್ಟಿ ಅಚಿವೆ ಉಪಸ್ಥಿತರಿರುವರು. ಕಾರಣ ಸದ್ರಿ ಚರ್ಚೆಯಲ್ಲಿ ಆಸಕ್ತ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.