Slide
Slide
Slide
previous arrow
next arrow

‘ಅಮ್ಮ ಹರಸಮ್ಮ’ ಚುಟುಕು ಪುಸ್ತಕ ಬಿಡುಗಡೆ

300x250 AD

ಕುಮಟಾ: ಹೆಗಡೆಯ ಕಾನಮ್ಮ ದೇವಾಲಯದಲ್ಲಿ ಇತ್ತೀಚೆಗೆ ‘ಅಮ್ಮ ಹರಸಮ್ಮ’ ಚುಟುಕು ಪುಸ್ತಕವನ್ನು ಆಧ್ಯಾತ್ಮ ಚಿಂತಕಿ ಕಲಾವತಿ ಭಟ್ಟ ಬಿಡುಗಡೆಗೊಳಿಸಿದರು.

ಸುಲೋಚನಾ ಉಪಾಧ್ಯಾಯ ಬರೆದು ಪ್ರಕಟಿಸಿದ ಅಮ್ಮ ಹರಸಮ್ಮ ಚುಟುಕು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದಅವರು ಸುಲೊಚನಾರವರು ಈಗಾಗಲೇ ಎರಡುಚುಟುಕು ಪುಸ್ತಕ ಪ್ರಕಟಿಸಿದ್ದು, ಇದು ಮೂರನೇಯದ್ದಾಗಿದೆ. ಅವರುತುಂಬಾಉತ್ತಮಚುಟುಕು ಬರಹಗಾರರಾಗಿದ್ದುಅರ್ಥಪೂರ್ಣವಾದಚುಟುಕು ಬರೆಯುತ್ತಾರೆ ಎಂದರು.

300x250 AD

ಸುವರ್ಣ ಅಯ್ಯರ್ ಪುಸ್ತಕದ ಬಗ್ಗೆ ಪರಿಚಯಿಸಿದರು. ನಿವೃತ್ತ ಪ್ರೊ. ಟಿ.ಜಿ ಭಟ್ಟ ಹಾಸಣಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶುಭ ಹಾರೈಸಿದರು. ಸುಕನ್ಯಾ ಬಾಯಿ ಉಪಸ್ಥಿತರಿದ್ದರು. ಕವಿತಾ ಹೆಗಡೆ ನಿರೂಪಿಸಿದರು. ಸುಲೋಚನಾ ಉಪಾಧ್ಯಾಯ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ವಿ.ಟಿ.ಉಪಾಧ್ಯಾಯ ವಂದಿಸಿದರು.

Share This
300x250 AD
300x250 AD
300x250 AD
Back to top