ಯಲ್ಲಾಪುರ: ತಾಲೂಕಿನ ಮಂಚಿಕೇರಿ ಸಮೀಪದ ಕೆರೆಗದ್ದೆ ನಿವಾಸಿ ಚಿದಂಬರ ಸುಬ್ರಾಯ ಶಾಸ್ತ್ರಿ (83) ಡಿ. 8 ಬುಧವಾರದಂದು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಮಂಚಿಕೇರಿ ಸಮೀಪದ ತುಂಬೆಬೀಡಿನವರಾಗಿದ್ದ ಇವರು, ಕೆರೆಗದ್ದೆಯಲ್ಲಿ ನೆಲೆನಿಂತು ಕೃಷಿಯ ಜೊತೆಗೆ ಪುರೋಹಿತರಾಗಿ ಸುತ್ತಮುತ್ತಲ ಊರಿನಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಪುತ್ರಿ ಸೇರಿದಂತೆ ಅನೇಕ ಒಡನಾಡಿಗಳನ್ನು ಅಗಲಿದ್ದಾರೆ.