• Slide
    Slide
    Slide
    previous arrow
    next arrow
  • ಚುನಾವಣೆ ಬಹಿಷ್ಕರಿಸಿ ತಹಶೀಲ್ದಾರರಿಗೆ ಮನವಿ ನೀಡಿದ ಮುಗದೂರು ವಾರ್ಡ್ ಸದಸ್ಯ

    300x250 AD


    ಸಿದ್ದಾಪುರ: ಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಕ್ಷೇತ್ರ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಗೆ ಮತವನ್ನು ಬಹಿಷ್ಕರಿಸುವುದಾ ಶಿರಳಗಿ ಗ್ರಾ.ಪಂ ಮುಗದೂರು ವಾರ್ಡ್ ಸದಸ್ಯ ಮಾರುತಿ ನಾಯ್ಕ ತಹಸೀಲ್ದಾರ್ ಹಾಗೂ ಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ.


    ಕರ್ನಾಟಕ ವಿಧಾನಪರಿಷತ್ತಿಗೆ ಸ್ಥಳೀಯ ಕ್ಷೇತ್ರ ಸಂಸ್ಥೆಗಳಿಂದ ದ್ವೈವಾರ್ಷಿಕಚುನಾವಣೆ 2021 ಕ್ಕೆ ಈ ಕೆಳಗೆ ಕಾಣಿಸಿದ ಕೆಲವು ಸರ್ಕಾರ ಧೋರಣೆಗಳಿಂದಾಗಿ ಸಾರ್ವಜನಿಕರಿಗೆ ಸ್ಪಂದಿಸಲು ಸದಸ್ಯರಾದ ನಮಗೆ ಕಷ್ಟಸಾಧ್ಯವಾದ್ದರಿಂದ ಲಿಖಿತವಾಗಿ ಸರ್ಕಾರದ ಪ್ರತಿನಿಧಿಗಳು ಸ್ಪಂದಿಸುವ ಶರತ್ತಿಗೆ ಒಳಪಟ್ಟ ಮತದಾನಕ್ಕೆ ಬಹಿಷ್ಕರಿಸುವ ಬಗ್ಗೆ ತಮ್ಮಗಮನವನ್ನುತರಬಯಸುತ್ತೇನೆಎಂದು ಮನವಿಯಲ್ಲಿ ತಿಳಿಸಿದ್ದಾರೆ.


    ಬೇಡಿಕೆಗಳು: ಕರ್ನಾಟಕ ಸರ್ಕಾರದಿಂದ ಕಳೆದ ಮೂರು ವರ್ಷಗಳಿಂದ ವಿವಿಧ ವಸತಿಯೋಜನೆಯಡಿ ಮನೆ ಬಿಡುಗಡೆಆಗಿರದೆಇರುವುದರಿಂದ ನನ್ನ ಮತದಾರರಿಗೆ ಮನೆ ಹಂಚಿಕೆ ಮಾಡಲುಆಗುತ್ತಿಲ್ಲ. ಮನೆ ಹಂಚಿಕೆಯನ್ನು ಮನೆ ನಂಬರ್‍ಇರುವ ಬಡ ಕೂಲಿ ಕಾರ್ಮಿಕರಿಗೆ ಹಂಚಲು ಅವಕಾಶ ಮಾಡಿಕೊಡುವುದು. 15ನೇ ಹಣಕಾಸುಯೋಜನೆ ಅಡಿ ನೀಡುವಅನುದಾನವನ್ನು ಶೇಕಡ 40 ಅನಿಬರ್ಂಧಿತ ಶೇಕಡ 60 ನಿಬರ್ಂಧಿತಅನುದಾನಎಂದು ಬಿಡುಗಡೆಗೊಳಿಸಲು ಇದ್ದು ಶೇಕಡ 40 ಅನಿಬರ್ಂಧಿತ ಅನುದಾನದಲ್ಲಿಅಭಿವೃದ್ಧಿ ಮಾಡುವುದುಕಷ್ಟಸಾಧ್ಯ.ಕಾರಣ 15ನೇ ಹಣಕಾಸುಅಡಿಯಲ್ಲಿ ಪೂರ್ಣ ಪ್ರಮಾಣದ ಹಣವನ್ನು ನಿಬರ್ಂಧಿತ ಸದಸ್ಯರು ಅನಿಬರ್ಂಧಿತಎಂದು ಪರಿಗಣಿಸಿದೆ ಪೂರ್ಣಪ್ರಮಾಣದಲ್ಲಿಕ್ರಿಯಾಯೋಜನೆಗೆ ಹಣ ಬಳಸಲು ಅವಕಾಶ ನೀಡುವುದು. ಗ್ರಾಮ ಪಂಚಾಯತ್‍ ಉದ್ಯೋಗಖಾತ್ರಿ ಯೋಜನೆಯಡಿ ನೊಂದಣಿಯಾಗಿರುವ ಕೂಲಿಕಾರ್ಮಿಕರಿಗೆ ಇಲಾಖೆಯಡಿಕಾರ್ಮಿಕರಿಂದ ಪರಿಗಣಿಸಿ ಜಾಬ್‍ಕಾರ್ಡ್‍ಹೊಂದಿರುವವರೆಗೂ ಸಹ ಆಹಾರಧಾನ್ಯಕಿಟ್‍ಇನ್ನಿತರ ಸೌಲಭ್ಯ ನೀಡಲು ಅನುಕೂಲವಾಗುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

    300x250 AD


    ಇಸ್ವತ್ತು ಸಮಸ್ಯೆಯಿಂದ ಬಡ ಕೂಲಿ ಕಾರ್ಮಿಕರಿಗೆ ಮನೆ ನಂಬರ್ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಬಯಲು ಮುಕ್ತ ಶೌಚಾಲಯಗ್ರಾಮಎಂದುಘೋಷಣೆಯಾದ ನಂತರ ಕಳೆದ ಹತ್ತು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ ಶೌಚಾಲಯಗಳ ರಿಪೇರಿ ಬಗ್ಗೆ ಸರ್ಕಾರದಿಂದ ಹಣ ಬಿಡುಗಡೆ ಬಗ್ಗೆ ಕ್ರಮ ಕೈಗೊಳ್ಳುವುದು. ಪಂಚಾಯತ್ ವ್ಯಾಪ್ತಿಯ ವಿವಿಧ ಆಸ್ತಿಗಳ ನಿರ್ವಹಣೆಯನ್ನು 15ನೇ ಹಣಕಾಸುಯೋಜನೆಯಡಿ ನಿರ್ವಹಿಸಲು ಕರ್ನಾಟಕ ಸರ್ಕಾರದಿಂದ ನಿರ್ದೇಶನ ಬಂದಿದ್ದುಅಂಗನವಾಡಿ ಮತ್ತುಇನ್ನಿತರೆ ಸಮುದಾಯ ಆಸ್ತಿಗಳ ನಿರ್ವಹಣೆ ಪ್ರತ್ಯೇಕಅನುದಾನವನ್ನುಗ್ರಾಮಪಂಚಾಯತ ಬಿಡುಗಡೆಗೊಳಿಸಲು ಕ್ರಮವಹಿಸುವುದು.

    ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮರಣ ಹೊಂದಿದ ಮುಖ್ಯಸ್ಥನ ಆಸ್ತಿ ದಾಖಲಾತಿಯನ್ನು ಮರಣ ಹೊಂದಿದ ಮುಖ್ಯಸ್ಥನ ಸರಳ ವಾರಸುದಾರರಿಗೆ ಹೆಂಡತಿ, ಮಗನಿಗೆ ವರ್ಗಾವಣೆ ಮಾಡಲುಅಂತರ್ಜಾಲದಲ್ಲಿ ಸಮಸ್ಯೆಯಿದ್ದುಇದನ್ನು ಸರಳಿಕರಣ ಮಾಡಲು ಕ್ರಮವಹಿಸುವುದು ಹಾಗೂ ಮೂಲ ಮನೆಯಿಂದ ಬೇರ್ಪಟ್ಟ ಕುಟುಂಬಗಳಿಗೆ ಮನೆ ನಂಬರ್ ನೀಡಿ ಮೂಲಸೌಕರ್ಯಒದಗಿಸಲು ಸರಳಗೊಳಿಸುವುದು ಮುಂತಾದ ಹಲವು ಬೇಡಿಕೆ ಒಳಗೊಂಡ ಮನವಿ ನೀಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top