ಯಲ್ಲಾಪುರ: ಭತ್ತದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ಸುಟ್ಟು ಕರಕಲಾದ ಘಟನೆ ಇಂದು ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ನಡೆದಿದೆ.
ಓಣಿಕೇರಿ ಗ್ರಾಮದ ಸದಾನಂದ ದೊಡ್ಡಮನಿ ಎಂಬುವರ ಭತ್ತದ ಬಣವೆ ಇದಾಗಿದೆ. ಈ ರೈತ ತನ್ನ ಎರಡು ಎಕರೆಯಲ್ಲಿ ಭತ್ತದ ಬೆಳೆಯನ್ನು ಕಟಾವ ಮಾಡಿ ಬಣವೆ ಮಾಡಿ ಇಟ್ಟಿದ್ದರು ಎನ್ನಲಾಗಿದೆ.