ಶಿರಸಿ: ನಗರದ ನೀಲೇಕಣಿ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವವು ಡಿ.9 ಗುರುವಾರದಂದು ನಡೆಯಲಿದೆ. ಆದರೆ ಈ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾರ್ವಜನಿಕ ರಥೋತ್ಸವ ಕಾರ್ಯಕ್ರಮ ಇರುವುದಿಲ್ಲ.
ಡಿ. 8, 9 ಮತ್ತು 10 ರಂದು ಶ್ರೀ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ದೇವಸ್ಥಾನದ ಮೊಕ್ತೇಸರ ಜಯದೇವ ಉದಯ ನಿಲೇಕಣಿ ತಿಳಿಸಿದ್ದಾರೆ.