ಅಂಕೋಲಾ: ರಾಷ್ಟ್ರೀಯ ಎನ್.ಸಿ.ಸಿ ದಿನಾಚರಣೆಯನ್ನು ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಮ್.ಹೈಸ್ಕೂಲ್ ಎನ್.ಸಿ.ಸಿ ಘಟಕದ ವತಿಯಿಂದ ಆಚರಣೆ ಮಾಡಲಾಯಿತು.
ಮೊದಲು ಗಿಡ ನೆಡುವುದರ ಮೂಲಕ ರಾಷ್ಟ್ರೀಯ ಎನ್.ಸಿ.ಸಿ ದಿನಾಚರಣೆಗೆ ಚಾಲನೆ ನೀಡಲಾಯಿತು. ನಂತರ ಅಜ್ಜಿಕಟ್ಟಾದಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ಆಶ್ರಮವಾಸಿಗಳಿಗೆ ಹಣ್ಣು-ಹಂಪಲ, ಆಹಾರದ ಬುತ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ ಎನ್.ಸಿ.ಸಿ.ಕಮಾಂಡರ್ ಜಿ.ಆರ್.ತಾಂಡೇಲ, ಸುಭೇದಾರ್ ಮೇಜರ್ ಕೆ.ಶಹಾಪುರಕರ್, ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಿ ಪ್ರಕಾಶ ಖಾರ್ವಿ, ಬೆಳಂಬಾರ ನಿವೃತ್ತ ಶಿಕ್ಷಕ ಪ್ರಕಾಶ ಕುಂಜಿ, ಶಿಕ್ಷಕರಾದ ಜಿ.ಎಸ್.ನಾಯ್ಕ, ಮುಗ್ದುಮ್ ಅಲ್ಗೋಡಿ, ಕಾ. ಸಹಾಯಕ ದಿನಕರ ನಾಯ್ಕ ಮತ್ತು ಎನ್.ಸಿ.ಸಿ. ಕೆಡೆಟ್ಗಳು ಭಾಗವಹಿಸಿದ್ದರು.