• Slide
    Slide
    Slide
    previous arrow
    next arrow
  • ಮನೆಯಲ್ಲಿ ಅಕ್ರಮ ಸಾರಾಯಿ ಸಂಗ್ರಹ; ಅಬಕಾರಿ ದಾಳಿ, ಓರ್ವನ ಬಂಧನ

    300x250 AD


    ಅಂಕೋಲಾ: ಗೋವಾ ಸಾರಾಯಿಯನ್ನು ಬೆಲೇಕೇರಿಯ ಬಂಗ್ಲೆವಾಡಾದಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರ ಬಗ್ಗೆ ಮಾಹಿತಿ ಪಡೆದ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ಮಾಡಿ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ.

    ಬೆಲೇಕೇರಿಯ ಸಂದೇಶ ನಾರಾಯಣ ಬಾನಾವಳಿಕರ ಬಂಧಿತ ಆರೋಪಿಯಾಗಿದ್ದು, ಇವರ ಮನೆಯಲ್ಲಿ ನಾಲ್ಕು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟ ಸುಮಾರು 12 ಸಾವಿರ ರೂಪಾಯಿ ಮೌಲ್ಯದ ಗೋವಾ ರಾಜ್ಯದಲ್ಲಿ ತಯಾರಾದ ಲೈಟ್ ಹಾರ್ಸ್ ಪ್ರೀಮಿಯಮ್ ಬ್ಲೆಂಡೆಡ್ ಮಾಲ್ಟ್ ವಿಸ್ಕಿ ಹೆಸರಿನ 180 ಎಂ.ಎಲ್ ನ 451 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

    300x250 AD

    ಅಂಕೋಲಾ ಅಬಕಾರಿ ಇಲಾಖೆಯ ನಿರೀಕ್ಷಕ ರಾಹುಲ್ ನಾಯಕ ಅವರ ಮಾರ್ಗದರ್ಶನ, ಉಪ ನಿರೀಕ್ಷಕಿ ಪ್ರೀತಿ ರಾಥೋಡ್ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಬ್ಬಂದಿಗಳಾದ ಎಚ್.ಕೆ.ಖಾನ್, ರಂಜನಾ ನಾಯ್ಕ, ಸುರೇಶ ಹಾರುಗೊಪ್ಪ, ಶ್ರೀಶೈಲ ಹಡಪದ, ಗಿರೀಶ್ ಅರವಾಳೆ, ಬಸಪ್ಪ ಅಂಗಡಿ, ಈರಣ್ಣ ಕುರುಬೇಟ ವಾಹನ ಚಾಲಕ ವಿನಾಯಕ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಅಬಕಾರಿ ನಿರೀಕ್ಷಕ ರಾಹುಲ್ ನಾಯಕ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top