• Slide
    Slide
    Slide
    previous arrow
    next arrow
  • ಅಪ್ಪ-ಅಮ್ಮ ಸೇವಾ ಸಂಸ್ಥೆಯಿಂದ ಬಾಲಕಿ ಶ್ರೀಲಕ್ಷ್ಮೀಗೆ ಸನ್ಮಾನ

    300x250 AD

    ಅಂಕೋಲಾ: ಮನೆಯಲ್ಲಿ ಶಾರ್ಟ್‍ಸರ್ಕೀಟ್ ನಿಂದ ಉಂಟಾಗುತ್ತಿದ್ದ ಭಾರೀ ಅನಾಹುತವನ್ನು ಬಾಲಕಿ ಶ್ರೀಲಕ್ಷ್ಮೀ ಸೂಕ್ತ ಸಮಯದಲ್ಲಿ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾಳೆ. ಆಕೆಯ ಜಾಣತನ ನೋಡಿ ಇಲ್ಲಿನ ಮಂಜಗುಣಿಯ ಅಪ್ಪ-ಅಮ್ಮ ಸೇವಾ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

    ಶ್ರೀಲಕ್ಷ್ಮೀ ನಾಗರಾಜ ಜಾಂಬಳೇಕರ ಪಿ.ಎಮ್ ಆಂಗ್ಲ ಮಾಧ್ಯಮಿಕ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ಸಂದರ್ಭದಲ್ಲಿ ಪಿ.ಎಮ್.ಹೈಸ್ಕೂಲಿನ ಮುಖ್ಯಾಧ್ಯಾಪಕ ಎಮ್.ಎ.ನಾಯ್ಕ ಮಾತನಾಡಿ, ಬದುಕಿಗೆ ಸಮಯ ಪ್ರಜ್ಞೆ ಬಹಳ ಮಹತ್ವದ್ದು. ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಳ್ಳಬೇಕೆಂದರು. ಅಪ್ಪ-ಅಮ್ಮ ಸೇವಾ ಸಂಸ್ಥೆಯಿಂದ ಬಾಲಕಿಗೆ ಸನ್ಮಾನಿಸಿರುವುದು ತುಂಬಾ ಸಂತೋಷದ ಸಂಗತಿಯೆಂದರು.

    300x250 AD

    ಈ ಸಂದರ್ಭದಲ್ಲಿ ಸೇವಾ ಸಂಸ್ಥೆಯ ಸಂಚಾಲಕ ಜಿ.ಆರ್.ತಾಂಡೇಲ ಪ್ರಾಸ್ತಾವಿಕ ಮಾತನಾಡಿ, ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪ್ರಕಾಶ ಕುಂಜಿ, ಶಿಕ್ಷಕಿ ನಯನಾ ನಾಯಕ ಶಿಕ್ಷಕರಾದ ವಿ.ಎಮ್.ನಾಯ್ಕ, ಪ್ರವೀಣ ಆಗೇರ, ದಿನಕರ ನಾಯ್ಕ, ಶಿಕ್ಷಕಿ ಸವಿತಾ ಪಿ.ಟಿ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top