ಶಿರಸಿ: ಡಿ.10ಕ್ಕೆ ನಡೆಯುವ ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ನ.27 ಶನಿವಾರ ಶಿರಸಿ-ಮುಂಡಗೋಡಕ್ಕೆ ಆಗಮಿಸಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ನ.27ರ ಮುಂಜಾನೆ 10 ಗಂಟೆಗೆ ಜಾನ್ಮನೆ, 11.30ಕ್ಕೆ ಹುಲೇಕಲ್, ಮಧ್ಯಾಹ್ನ 1 ಗಂಟೆಗೆ ಬನವಾಸಿ, 3 ಕ್ಕೆ ಬಿಸಲಕೊಪ್ಪ, 4.30ಕ್ಕೆ ಮಳಗಿ, ಸಂಜೆ 6 ಗಂಟೆಗೆ ಮುಂಡಗೋಡಿನಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದ್ದಾರೆ.