ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದ ಮಹಿಳೆಗೆ 108 ಆಂಬುಲೆನ್ಸ್ನಲ್ಲಿ ಕರೆ ತರುತ್ತಿದ್ದಾಗ ಮಾರ್ಗಮಧ್ಯೆ ಇಂದಿರಾನಗರ ಕೊಪ್ಪ ಹತ್ತಿರ ಗುರುವಾರ ಹೆರಿಗೆಯಾಗಿದೆ.
ಅನಿತಾ ಅಡಿಗೇರ್ ಎಂಬುವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಕೊಪ್ಪ ಗ್ರಾಮದಿಂದ ತಾಲೂಕು ಆಸ್ಪತ್ರೆಗೆ 108 ಆಂಬುಲೆನ್ಸ್ನಲ್ಲಿ ಕರೆ ತರುತ್ತಿದ್ದಾಗ ಇಂದಿರಾನಗರ ಬಳಿ ಮಹಿಳೆಗೆ ತುಂಬಾ ನೋವು ಕಾಣಿಸಿಕೊಂಡಿತು. ತಕ್ಷಣ ಆಂಬುಲೆನ್ಸ್ ಅನ್ನು ಪಕ್ಕಕ್ಕೆ ನಿಲ್ಲಿಸಿ ವಾಹನದಲ್ಲಿದ್ದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು, ಮತ್ತು ಚಾಲಕ ಪ್ರಕಾಶ ಬಾಗೇವಾಡಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.