ಕಾರವಾರ: ಪ್ರಯಾಣಿಕರ ಬೇಡಿಕೆ ಮೇರೆಗೆ ಕಾರವಾರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಸಾರಿಗೆ ಬಸ್’ನ್ನು ಪ್ರಾರಂಭಿಸಲಾಗಿದೆ ಎಂದು ವಾಕರಸಾ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿರಾಜಕುಮಾರ ತಿಳಿಸಿದ್ದಾರೆ.
ಈ ಬಸ್ ವಾಯಾ ಅಂಕೋಲಾ, ಯಲ್ಲಾಪುರ,ಕಲಘಟಗಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸಲಿದೆ. ಕಾರವಾರದಿಂದ ಸಂಜೆ 7.45 ಗಂಟೆಗೆ ಹೊರಟು ಬೆಂಗಳೂರನ್ನು ಮುಂಜಾನೆ 7.45 ಕ್ಕೆ ತಲುಪುತ್ತದೆ. ಬೆಂಗಳೂರಿನಿಂದ ರಾತ್ರಿ 8.15 ಗಂಟೆಗೆ ಹೊರಟುಕಾರವಾರಕ್ಕೆ ಮುಂಜಾನೆ 8.00 ಗಂಟೆಗೆ ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಮತ್ತು ksrtc.in ವೆಬ್ಸೈಟ್ ಮೂಲಕ ಅಥವಾ ಸಮೀಪದ ಬಸ್ ನಿಲ್ದಾಣದ ರಿಸರ್ವೇಶನ್ ಕೌಂಟರ್ಗಳಲ್ಲಿ ಮುಂಗಡ ಟಿಕೇಟ್ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.